<p>ಕೆಂಭಾವಿ: ‘ಕ್ರಿಕೆಟ್ ಆಟದಲ್ಲಿ ಯಾವುದೇ ಜಾತಿ – ಮತ, ಮೇಲು – ಕೀಳು ಎಂದು ಒಬ್ಬೊಬ್ಬರಿಗೆ ಒಂದು ನಿಯಮವಿಲ್ಲ. ಇಲ್ಲಿ ಎಲ್ಲರಿಗೂ ಸಮಾನ ನಿಯಮ ಇರುವುದರಿಂದ ಇಂದಿನ ದಿನಗಳಲ್ಲಿ ಕ್ರಿಕೆಟ್ ಒಂದು ಆಟವಾಗಿರದೆ, ಆಟಗಾರನ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ’ ಎಂದು ಮಾಜಿ ಸಚಿವ ರಾಜೂಗೌಡ ಹೇಳಿದರು.</p>.<p>ಪಟ್ಟಣದ ಹಿಲ್ ಟಾಪ್ ಮೈದಾನದಲ್ಲಿ ಮಂಗಳವಾರ ನಡೆದ ‘ಎನ್ಆರ್ಜಿ ಟ್ರೋಫಿ’ಯ ಅಂತಿಮ ಪಂದ್ಯದಲ್ಲಿ ಜಯಗಳಿಸಿದ ಪ್ರಿನ್ಸ್ ಪ್ಯಾಂಥರ್ಸ್ ತಂಡಕ್ಕೆ ಹಾಗೂ ದ್ವಿತೀಯ ಸ್ಥಾನ ಪಡೆದ ನಗನೂರು ತಂಡಕ್ಕೆ ಬಹುಮಾನ ವಿತರಿಸಿ ಅವರು ಮಾತನಾಡಿದರು.</p>.<p>‘ಕ್ರಿಕೆಟ್ಗೆ ನಮ್ಮ ಭಾಗದಲ್ಲಿ ಹೆಚ್ಚು ಜನಮನ್ನಣೆ ಸಿಕ್ಕಿದೆ. ಅದರಂತೆ ಒಳ್ಳೆಯ ಆಟಗಾರರು ಇಲ್ಲಿದ್ದಾರೆ. ಅವರಲ್ಲಿನ ಪ್ರತಿಭೆ ಹೊರತರಲು ಇಂತಹ ಪಂದ್ಯಾವಳಿಗಳು ಅನುಕೂಲವಾಗುತ್ತವೆ. ಅಲ್ಲದೆ ನಾನು ಕೂಡಾ ಸ್ವತಃ ಕ್ರಿಕೆಟ್ ಆಟಗಾರನಾಗಿರುವುದರಿಂದ ಕ್ರೀಡೆಗೆ ಸದಾ ಪ್ರೋತ್ಸಾಹ ನೀಡುತ್ತೇನೆ’ ಎಂದರು.</p>.<p>‘ಆಟದಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಗುಣ ಹೊಂದಿರಬೇಕು. ನನಗೂ ಈ ಗುಣ ಬಂದಿದ್ದು ಆಟದಿಂದಲೇ. ಹಾಗಾಗಿ ನಾನು ಚುನಾವಣೆಯಲ್ಲಿ ಸೋತರು ಸಹ ಜನಗಳ ಮಧ್ಯೆ ಇರಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.</p>.<p>ಇದಕ್ಕೂ ಮುನ್ನ ಕೆಂಭಾವಿ ವಲಯದ ಸಿಆರ್ಪಿ ಬಂದೇನವಾಜ್ ನಾಲತವಾಡ, ಬಿಜೆಪಿ ಯುವ ಮುಖಂಡ ಕೃಷ್ಣಾಡ್ಡಿ ಮುದನೂರ ಮಾತನಾಡಿದರು.</p>.<p>ಈ ಸಂದರ್ಭದಲ್ಲಿ ಸಚಿನ ನಾಯಕ್, ನಿತಿನ್ ಶೆಟ್ಟಿ ಬೈಂದೂರ, ಮಂಜು ಕಂಬಾರ, ಪುರಸಭೆ ಸದಸ್ಯ ರಾಘವೇಂದ್ರ ಕವಲ್ದಾರ್, ಸಿಆರ್ಪಿ ಶ್ರೀಶೈಲ ಪಾಸೋಡಿ, ಹನೀಫ್ ಸಾಸನೂರು, ಸಿದ್ರಾಮರೆಡ್ಡಿ, ಹಣಮಯ್ಯ ಗುತ್ತೇದಾರ, ರವಿಕುಮಾರ ಭೋವಿ, ಶಿವು ಮಲ್ಲಿಭಾವಿ ಇದ್ದರು. ಡಿ.ಸಿ ಪಾಟೀಲ ನಿರೂಪಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260509-30-1940873407</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೆಂಭಾವಿ: ‘ಕ್ರಿಕೆಟ್ ಆಟದಲ್ಲಿ ಯಾವುದೇ ಜಾತಿ – ಮತ, ಮೇಲು – ಕೀಳು ಎಂದು ಒಬ್ಬೊಬ್ಬರಿಗೆ ಒಂದು ನಿಯಮವಿಲ್ಲ. ಇಲ್ಲಿ ಎಲ್ಲರಿಗೂ ಸಮಾನ ನಿಯಮ ಇರುವುದರಿಂದ ಇಂದಿನ ದಿನಗಳಲ್ಲಿ ಕ್ರಿಕೆಟ್ ಒಂದು ಆಟವಾಗಿರದೆ, ಆಟಗಾರನ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ’ ಎಂದು ಮಾಜಿ ಸಚಿವ ರಾಜೂಗೌಡ ಹೇಳಿದರು.</p>.<p>ಪಟ್ಟಣದ ಹಿಲ್ ಟಾಪ್ ಮೈದಾನದಲ್ಲಿ ಮಂಗಳವಾರ ನಡೆದ ‘ಎನ್ಆರ್ಜಿ ಟ್ರೋಫಿ’ಯ ಅಂತಿಮ ಪಂದ್ಯದಲ್ಲಿ ಜಯಗಳಿಸಿದ ಪ್ರಿನ್ಸ್ ಪ್ಯಾಂಥರ್ಸ್ ತಂಡಕ್ಕೆ ಹಾಗೂ ದ್ವಿತೀಯ ಸ್ಥಾನ ಪಡೆದ ನಗನೂರು ತಂಡಕ್ಕೆ ಬಹುಮಾನ ವಿತರಿಸಿ ಅವರು ಮಾತನಾಡಿದರು.</p>.<p>‘ಕ್ರಿಕೆಟ್ಗೆ ನಮ್ಮ ಭಾಗದಲ್ಲಿ ಹೆಚ್ಚು ಜನಮನ್ನಣೆ ಸಿಕ್ಕಿದೆ. ಅದರಂತೆ ಒಳ್ಳೆಯ ಆಟಗಾರರು ಇಲ್ಲಿದ್ದಾರೆ. ಅವರಲ್ಲಿನ ಪ್ರತಿಭೆ ಹೊರತರಲು ಇಂತಹ ಪಂದ್ಯಾವಳಿಗಳು ಅನುಕೂಲವಾಗುತ್ತವೆ. ಅಲ್ಲದೆ ನಾನು ಕೂಡಾ ಸ್ವತಃ ಕ್ರಿಕೆಟ್ ಆಟಗಾರನಾಗಿರುವುದರಿಂದ ಕ್ರೀಡೆಗೆ ಸದಾ ಪ್ರೋತ್ಸಾಹ ನೀಡುತ್ತೇನೆ’ ಎಂದರು.</p>.<p>‘ಆಟದಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಗುಣ ಹೊಂದಿರಬೇಕು. ನನಗೂ ಈ ಗುಣ ಬಂದಿದ್ದು ಆಟದಿಂದಲೇ. ಹಾಗಾಗಿ ನಾನು ಚುನಾವಣೆಯಲ್ಲಿ ಸೋತರು ಸಹ ಜನಗಳ ಮಧ್ಯೆ ಇರಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.</p>.<p>ಇದಕ್ಕೂ ಮುನ್ನ ಕೆಂಭಾವಿ ವಲಯದ ಸಿಆರ್ಪಿ ಬಂದೇನವಾಜ್ ನಾಲತವಾಡ, ಬಿಜೆಪಿ ಯುವ ಮುಖಂಡ ಕೃಷ್ಣಾಡ್ಡಿ ಮುದನೂರ ಮಾತನಾಡಿದರು.</p>.<p>ಈ ಸಂದರ್ಭದಲ್ಲಿ ಸಚಿನ ನಾಯಕ್, ನಿತಿನ್ ಶೆಟ್ಟಿ ಬೈಂದೂರ, ಮಂಜು ಕಂಬಾರ, ಪುರಸಭೆ ಸದಸ್ಯ ರಾಘವೇಂದ್ರ ಕವಲ್ದಾರ್, ಸಿಆರ್ಪಿ ಶ್ರೀಶೈಲ ಪಾಸೋಡಿ, ಹನೀಫ್ ಸಾಸನೂರು, ಸಿದ್ರಾಮರೆಡ್ಡಿ, ಹಣಮಯ್ಯ ಗುತ್ತೇದಾರ, ರವಿಕುಮಾರ ಭೋವಿ, ಶಿವು ಮಲ್ಲಿಭಾವಿ ಇದ್ದರು. ಡಿ.ಸಿ ಪಾಟೀಲ ನಿರೂಪಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260509-30-1940873407</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>