<p>ಮಡಿಕೇರಿ: ಕೊಡವ ಕುಟುಂಬಗಳ ನಡುವಿನ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ಟೂರ್ನಿ’ಯ ಪುರುಷರ ವಿಭಾಗದಲ್ಲಿ ಚೆಕ್ಕೇರ ತಂಡ ಮತ್ತು ಮಹಿಳೆಯರ ವಿಭಾಗದಲ್ಲಿ ಮುಕ್ಕಾಟಿರ (ಹರಿಹರ) ತಂಡಗಳು ಚಾಂಪಿಯನ್ ಆಗಿ ಹೊರಹೊಮ್ಮಿದವು.</p>.<p>ಪುರುಷರ ವಿಭಾಗ ದಲ್ಲಿ ಕೆದಮಳ್ಳೂರು ಮಾಳೇಟಿರ ಹಾಗೂ ಮಹಿಳೆಯ ವಿಭಾಗದಲ್ಲಿ ಮಣವಟ್ಟಿರ ತಂಡವು ರನ್ನರ್ಸ್ ಸ್ಥಾನ ಪಡೆದುಕೊಂಡವು.</p>.<p>ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಶುಕ್ರವಾರ ನಡೆದ ಫೈನಲ್ ಪಂದ್ಯಗಳು ರೋಮಾಂಚನಕಾರಿಯಾಗಿದ್ದು, ಸೇರಿದ್ದ ಅಪಾರ ಸಂಖ್ಯೆಯ ಪ್ರೇಕ್ಷಕರ ಮನತಣಿಸಿತು.</p>.<p>ಮಹಿಳಾ ತಂಡದ ಫೈನಲ್ ಪಂದ್ಯದಲ್ಲಿ ಮೊದಲಿಗೆ ಟಾಸ್ ಗೆದ್ದ ಮಣವಟ್ಟಿರ ತಂಡ ಬ್ಯಾಟಿಂಗ್ ಅಯ್ದುಕೊಂಡಿತು. ನಿಗದಿತ 6 ಓವರ್ನಲ್ಲಿ 1 ವಿಕೆಟ್ ಕಳೆದುಕೊಂಡು 41 ರನ್ ಗಳಿಸಿತು.</p>.<p>ಗುರಿಯ ಬೆನ್ನು ಹತ್ತಿದ ಹರಿಹರ ಮುಕ್ಕಾಟಿರ ತಂಡವು 5.3 ಓವರ್ನಲ್ಲಿಯೇ 42 ರನ್ ಗುರಿ ತಲುಪಿ ಚಾಂಪಿಯನ್ ಆಗಿ ಹೊರಹೊಮ್ಮಿತು.</p>.<p>ಮಣವಟ್ಟಿರ ತಂಡದ ಪರವಾಗಿ ಸಂಗೀತ 22 ಹಾಗೂ ಅರ್ಪಿತ 12 ರನ್ ಗಳಿಸಿದರು. ಹರಿಹರ ಮುಕ್ಕಾಟಿರ ತಂಡದ ಪರವಾಗಿ ಭಾರತಿ ಶುಭ 12, ಅಂಜನ 12 ಹಾಗೂ ಪ್ರಮಿ ಬಿದ್ದಪ್ಪ ಅವರು 11 ರನ್ ಗಳಿಸಿದರು. ಹರಿಹರ ಮುಕ್ಕಾಟಿರ ತಂಡದ ಭಾರತಿ ಶುಭ ‘ವುಮೆನ್ ಆಫ್ ದ ಮ್ಯಾಚ್’ ಪ್ರಶಸ್ತಿ ತಮ್ಮದಾಗಿಸಿಕೊಂಡರೆ, ಉತ್ತಮ ಪ್ರದರ್ಶನಕ್ಕೆ ಮಣವಟ್ಟಿರ ಸಂಗೀತ ‘ವುಮೆನ್ ಮ್ಯಾಚ್ ಆಫ್’ ಸ್ಥಾನಕ್ಕೆ ಪಾತ್ರರಾದರು.</p>.<p>ಪುರುಷರ ವಿಭಾಗದಲ್ಲಿ ಚೆಕ್ಕೇರ ತಂಡ ಮತ್ತು ಕೆದಮಳ್ಳೂರು ಮಾಳೇಟಿರ ತಂಡಗಳು ಫೈನಲ್ ಪಂದ್ಯದಲ್ಲಿ ಚಾಂಪಿಯನ್ ಪಟ್ಟಕ್ಕಾಗಿ ಹೋರಾಟಕ್ಕಿಳಿದವು.</p>.<p>ಮಾಳೇಟಿರ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡು 10 ಓವರ್ಗಳಲ್ಲಿ 9 ವಿಕೆಟ್ಗಳನ್ನು ಕಳೆದುಕೊಂಡು 101 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಚೆಕ್ಕೇರ ತಂಡ 8 ಓವರ್ಲ್ಲೇ 4 ವಿಕೆಟ್ ಕಳೆದುಕೊಂಡು ನಿಗದಿತ ಗುರಿ ತಲುಪಿ ಚಾಂಪಿಯನ್ ಆಗಿ ಹೊರಹೊಮ್ಮಿತು.</p>.<p>ಮಾಳೇಟಿರ ತಂಡದ ಪರವಾಗಿ ರಾನೆ ಕರುಂಬಯ್ಯ 64, ರಿತೇಶ್ ಕುಟ್ಟಪ್ಪ 16, ರಿಶಬ್ ಬೋಪಯ್ಯ 13 ರನ್ ಗಳಿಸಿದರು. ಕಾರ್ಯಪ್ಪ ಹಾಗೂ ಸಜನ್ ಸೋಮಯ್ಯ ತಲಾ 3 ವಿಕೆಟ್ ಹಾಗೂ ಆಕಾಶ್ 1 ವಿಕೆಟ್ ಪಡೆದರು. ಚೆಕ್ಕೇರ ತಂಡದ ಪರವಾಗಿ ಕಾರ್ಯಪ್ಪ 52, ಆಕಾಶ್ 11, ಸಜನ್ ಸೋಮಯ್ಯ 35 ರನ್ ಗಳಿಸಿದರು. ವಿಕಾಶ್ ಮುದ್ದಪ್ಪ 2, ನವೀನ್ ನಂಜಪ್ಪ ಹಾಗೂ ರಾನೆ ಕರುಂಬಯ್ಯ ತಲಾ 1 ವಿಕೆಟ್ ಪಡೆದರು. ಚಕ್ಕೇರ ಕಾರ್ಯಪ್ಪ ಹಾಗೂ ಮಾಳೇಟಿರ ರಾನೆ ಕರುಂಬಯ್ಯ ಪಂದ್ಯ ಪುರುಷೋತ್ತಮ ಗೌರವಕ್ಕೆ ಪಾತ್ರರಾದರು.</p>.<p>ಬೇತ್ರಿ ಮುಕ್ಕಾಟಿರ ಕ್ರಿಕೆಟ್ ಟೂರ್ನಿಯ ಅಧ್ಯಕ್ಷ ಸುರೇಶ್ ಪೆಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಮುಕ್ಕಾಟಿರ ರವಿ ಚೀಯಣ್ಣ, ಉದ್ಯಮಿಗಳಾದ ಮಾಚೆಟ್ಟಿರ ಜೆನಿತ್ ಅಯ್ಯಪ್ಪ, ಮಣವಟ್ಟಿರ ಮಧು ಬೋಪಣ್ಣ, ಎಸ್.ಬಾಲಚಂದ್ರ, ಕೊಡವ ಕ್ರಿಕೆಟ್ ಅಕಾಡೆಮಿ ಉಪಾಧ್ಯಕ್ಷ ಚೇರಂಡ ಕಿಶನ್, ಹಿರಿಯ ಆರ್ಟಿಓ ಅಧಿಕಾರಿ ನಂದೇಟಿರ ಸುಬ್ಬಯ್ಯ, ಕ್ರಿಕೆಟ್ ಅಕಾಡೆಮಿ ಕಾರ್ಯದರ್ಶಿ ಬೋಪಣ್ಣ ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260502-51-1349794113</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಡಿಕೇರಿ: ಕೊಡವ ಕುಟುಂಬಗಳ ನಡುವಿನ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ಟೂರ್ನಿ’ಯ ಪುರುಷರ ವಿಭಾಗದಲ್ಲಿ ಚೆಕ್ಕೇರ ತಂಡ ಮತ್ತು ಮಹಿಳೆಯರ ವಿಭಾಗದಲ್ಲಿ ಮುಕ್ಕಾಟಿರ (ಹರಿಹರ) ತಂಡಗಳು ಚಾಂಪಿಯನ್ ಆಗಿ ಹೊರಹೊಮ್ಮಿದವು.</p>.<p>ಪುರುಷರ ವಿಭಾಗ ದಲ್ಲಿ ಕೆದಮಳ್ಳೂರು ಮಾಳೇಟಿರ ಹಾಗೂ ಮಹಿಳೆಯ ವಿಭಾಗದಲ್ಲಿ ಮಣವಟ್ಟಿರ ತಂಡವು ರನ್ನರ್ಸ್ ಸ್ಥಾನ ಪಡೆದುಕೊಂಡವು.</p>.<p>ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಶುಕ್ರವಾರ ನಡೆದ ಫೈನಲ್ ಪಂದ್ಯಗಳು ರೋಮಾಂಚನಕಾರಿಯಾಗಿದ್ದು, ಸೇರಿದ್ದ ಅಪಾರ ಸಂಖ್ಯೆಯ ಪ್ರೇಕ್ಷಕರ ಮನತಣಿಸಿತು.</p>.<p>ಮಹಿಳಾ ತಂಡದ ಫೈನಲ್ ಪಂದ್ಯದಲ್ಲಿ ಮೊದಲಿಗೆ ಟಾಸ್ ಗೆದ್ದ ಮಣವಟ್ಟಿರ ತಂಡ ಬ್ಯಾಟಿಂಗ್ ಅಯ್ದುಕೊಂಡಿತು. ನಿಗದಿತ 6 ಓವರ್ನಲ್ಲಿ 1 ವಿಕೆಟ್ ಕಳೆದುಕೊಂಡು 41 ರನ್ ಗಳಿಸಿತು.</p>.<p>ಗುರಿಯ ಬೆನ್ನು ಹತ್ತಿದ ಹರಿಹರ ಮುಕ್ಕಾಟಿರ ತಂಡವು 5.3 ಓವರ್ನಲ್ಲಿಯೇ 42 ರನ್ ಗುರಿ ತಲುಪಿ ಚಾಂಪಿಯನ್ ಆಗಿ ಹೊರಹೊಮ್ಮಿತು.</p>.<p>ಮಣವಟ್ಟಿರ ತಂಡದ ಪರವಾಗಿ ಸಂಗೀತ 22 ಹಾಗೂ ಅರ್ಪಿತ 12 ರನ್ ಗಳಿಸಿದರು. ಹರಿಹರ ಮುಕ್ಕಾಟಿರ ತಂಡದ ಪರವಾಗಿ ಭಾರತಿ ಶುಭ 12, ಅಂಜನ 12 ಹಾಗೂ ಪ್ರಮಿ ಬಿದ್ದಪ್ಪ ಅವರು 11 ರನ್ ಗಳಿಸಿದರು. ಹರಿಹರ ಮುಕ್ಕಾಟಿರ ತಂಡದ ಭಾರತಿ ಶುಭ ‘ವುಮೆನ್ ಆಫ್ ದ ಮ್ಯಾಚ್’ ಪ್ರಶಸ್ತಿ ತಮ್ಮದಾಗಿಸಿಕೊಂಡರೆ, ಉತ್ತಮ ಪ್ರದರ್ಶನಕ್ಕೆ ಮಣವಟ್ಟಿರ ಸಂಗೀತ ‘ವುಮೆನ್ ಮ್ಯಾಚ್ ಆಫ್’ ಸ್ಥಾನಕ್ಕೆ ಪಾತ್ರರಾದರು.</p>.<p>ಪುರುಷರ ವಿಭಾಗದಲ್ಲಿ ಚೆಕ್ಕೇರ ತಂಡ ಮತ್ತು ಕೆದಮಳ್ಳೂರು ಮಾಳೇಟಿರ ತಂಡಗಳು ಫೈನಲ್ ಪಂದ್ಯದಲ್ಲಿ ಚಾಂಪಿಯನ್ ಪಟ್ಟಕ್ಕಾಗಿ ಹೋರಾಟಕ್ಕಿಳಿದವು.</p>.<p>ಮಾಳೇಟಿರ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡು 10 ಓವರ್ಗಳಲ್ಲಿ 9 ವಿಕೆಟ್ಗಳನ್ನು ಕಳೆದುಕೊಂಡು 101 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಚೆಕ್ಕೇರ ತಂಡ 8 ಓವರ್ಲ್ಲೇ 4 ವಿಕೆಟ್ ಕಳೆದುಕೊಂಡು ನಿಗದಿತ ಗುರಿ ತಲುಪಿ ಚಾಂಪಿಯನ್ ಆಗಿ ಹೊರಹೊಮ್ಮಿತು.</p>.<p>ಮಾಳೇಟಿರ ತಂಡದ ಪರವಾಗಿ ರಾನೆ ಕರುಂಬಯ್ಯ 64, ರಿತೇಶ್ ಕುಟ್ಟಪ್ಪ 16, ರಿಶಬ್ ಬೋಪಯ್ಯ 13 ರನ್ ಗಳಿಸಿದರು. ಕಾರ್ಯಪ್ಪ ಹಾಗೂ ಸಜನ್ ಸೋಮಯ್ಯ ತಲಾ 3 ವಿಕೆಟ್ ಹಾಗೂ ಆಕಾಶ್ 1 ವಿಕೆಟ್ ಪಡೆದರು. ಚೆಕ್ಕೇರ ತಂಡದ ಪರವಾಗಿ ಕಾರ್ಯಪ್ಪ 52, ಆಕಾಶ್ 11, ಸಜನ್ ಸೋಮಯ್ಯ 35 ರನ್ ಗಳಿಸಿದರು. ವಿಕಾಶ್ ಮುದ್ದಪ್ಪ 2, ನವೀನ್ ನಂಜಪ್ಪ ಹಾಗೂ ರಾನೆ ಕರುಂಬಯ್ಯ ತಲಾ 1 ವಿಕೆಟ್ ಪಡೆದರು. ಚಕ್ಕೇರ ಕಾರ್ಯಪ್ಪ ಹಾಗೂ ಮಾಳೇಟಿರ ರಾನೆ ಕರುಂಬಯ್ಯ ಪಂದ್ಯ ಪುರುಷೋತ್ತಮ ಗೌರವಕ್ಕೆ ಪಾತ್ರರಾದರು.</p>.<p>ಬೇತ್ರಿ ಮುಕ್ಕಾಟಿರ ಕ್ರಿಕೆಟ್ ಟೂರ್ನಿಯ ಅಧ್ಯಕ್ಷ ಸುರೇಶ್ ಪೆಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಮುಕ್ಕಾಟಿರ ರವಿ ಚೀಯಣ್ಣ, ಉದ್ಯಮಿಗಳಾದ ಮಾಚೆಟ್ಟಿರ ಜೆನಿತ್ ಅಯ್ಯಪ್ಪ, ಮಣವಟ್ಟಿರ ಮಧು ಬೋಪಣ್ಣ, ಎಸ್.ಬಾಲಚಂದ್ರ, ಕೊಡವ ಕ್ರಿಕೆಟ್ ಅಕಾಡೆಮಿ ಉಪಾಧ್ಯಕ್ಷ ಚೇರಂಡ ಕಿಶನ್, ಹಿರಿಯ ಆರ್ಟಿಓ ಅಧಿಕಾರಿ ನಂದೇಟಿರ ಸುಬ್ಬಯ್ಯ, ಕ್ರಿಕೆಟ್ ಅಕಾಡೆಮಿ ಕಾರ್ಯದರ್ಶಿ ಬೋಪಣ್ಣ ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260502-51-1349794113</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>