<p>ಮಡಿಕೇರಿ: ತಾಲ್ಲೂಕಿನ ಮರಗೋಡುವಿನ ಭಾರತಿ ಜೂನಿಯರ್ ಕಾಲೇಜು ಮೈದಾನದಲ್ಲಿ ಗೌಡ ಇವಿನಿಂಗ್ ಸ್ಟಾರ್ ವತಿಯಿಂದ ಸೋಮವಾರ ಆರಂಭವಾದ ಗೌಡ ಜನಾಂಗದ ಕುಟುಂಬವಾರು ಕ್ರಿಕೆಟ್ನಲ್ಲಿ ಉಳುವಾರನ ಪ್ರಿಕ್ವಾರ್ಟರ್ ತಲುಪಿ ಪಾರಮ್ಯ ಮೆರೆಯಿತು.</p>.<p>ಉಳುವಾರನ ತಂಡ 1 ವಿಕೆಟ್ ನಷ್ಟದಲ್ಲಿ 94 ರನ್ ಕಲೆ ಹಾಕಿದರೆ, ತುಂತಜೆ ತಂಡ 4 ವಿಕೆಟ್ ಕಳೆದುಕೊಂಡು ಕೇವಲ 21 ರನ್ ಮಾತ್ರ ಗಳಿಸಿತು. ಈ ಮೂಲಕ 73 ರನ್ಗಳ ಬೃಹತ್ ಅಂತರದ ಜಯವನ್ನು ಉಳುವಾರನ ತಂಡ ಪಡೆದುಕೊಂಡಿತು. ಮತ್ತೊಂದು ಪಂದ್ಯದಲ್ಲಿ ಹೊಸೂರು ತಂಡ 7 ವಿಕೆಟ್ಗೆ 46 ರನ್ ಗಳಿಸಿದರೆ ಉಳುವಾರನ ತಂಡ 1 ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿ ಪ್ರಿಕ್ವಾರ್ಟರ್ ಹಂತಕ್ಕೆ ಪ್ರವೇಶಿಸಿತು. ಉಳಿದಂತೆ, ತುಂತಜೆ, ಹೊಸೂರು, ತೇಲಬೈಲು ತಂಡಗಳು ಶುಭಾರಂಭ ಮಾಡಿದವು.</p>.<p>ಮೂಡಗದ್ದೆ ತಂಡ ನಿಗದಿತ 6 ಓವರ್ಗಳಲ್ಲಿ 3 ವಿಕೆಟ್ಗೆ 57 ರನ್ ಗಳಿಸಿದರೆ, ತುಂತಜೆ ತಂಡ ಒಂದು ವಿಕೆಟ್ ನಷ್ಟದಲ್ಲಿ 60 ಗಳಿಸಿ ಗುರಿ ಸಾಧಿಸಿತು.</p>.<p>ಹೊಸೂರು ತಂಡ 4 ವಿಕೆಟ್ಗೆ 50 ರನ್ ಕಲೆ ಹಾಕಿದರೆ, ಕಾಂಗಿರ ತಂಡ 7 ವಿಕೆಟ್ ಕಳೆದುಕೊಂಡು 34 ರನ್ ಮಾತ್ರ ಗಳಿಸಿ ಸೋಲನುಭವಿಸಿತು. ತೇಲಬೈಲು ತಂಡ 6 ವಿಕೆಟ್ಗೆ 57 ರನ್ ಗಳಿಸಿದರೆ, ಕೈಕೇರಿ ಮುಕ್ಕಾಟಿ ತಂಡ 6 ವಿಕೆಟ್ಗೆ 49 ರನ್ ಗಳಿಸಿ ಸೋಲನುಭವಿಸಿತು.</p>.<p>ಹೊಸೂರು ತಂಡ 2 ವಿಕೆಟ್ಗೆ 77 ರನ್ ಗಳಿಸಿದರೆ, ತೇಲಬೈಲು ತಂಡ 7 ವಿಕೆಟ್ ಕಳೆದುಕೊಂಡು 50ರನ್ ಮಾತ್ರ ಗಳಿಸಿ 27 ರನ್ಗಳ ಅಂತರದಿಂದ ಸೋಲನುಭವಿಸಿತು. ಮುಕ್ಕಾಟಿ ತಂಡ 7 ವಿಕೆಟ್ಗೆ 24 ರನ್ ಗಳಿಸಿದರೆ, ಬೈಮನ ತಂಡ 5 ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು.</p>.<p>ಇದಕ್ಕೂ ಮುನ್ನ ನಡೆದ ಪ್ರದರ್ಶನ ಪಂದ್ಯದಲ್ಲ ಸ್ಥಳೀಯ ಆತಿಥೇಯ ಗೌಡ ಇವಿನಿಂಗ್ ಸ್ಟಾರ್ ತಂಡದ ವಿರುದ್ಧ ಕೊಡಗು ಪತ್ರಕರ್ತರ ತಂಡ ಜಯ ಸಾಧಿಸಿತು.</p>.<p>ಇದಕ್ಕೂ ಮುನ್ನ ಪಂದ್ಯಾವಳಿ ಉದ್ಘಾಟಿಸಿದ ಮ್ಯಾರಥಾನ್ ಓಟಗಾರ ಹೊಸೋಕ್ಲು ಚಿಣ್ಣಪ್ಪ, ‘ಕ್ರೀಡಾಪಟುಗಳು ಯಾವದೇ ಬೇಧ ಭಾವವಿಲ್ಲದೆ ಎಲ್ಲರೂ ಒಗ್ಗಟ್ಟನ್ನು ಪ್ರದರ್ಶಿಸಬೇಕು’ ಎಂದು ಹೇಳಿದರು.</p>.<p>ಇವಿನಿಂಗ್ ಸ್ಟಾರ್ ಅಧ್ಯಕ್ಷ ಕಟ್ಟೆಮನೆ ರೋಷನ್, ಒಕ್ಕಲಿಗರ ಸಂಘದ ಉಪಾಧ್ಯಕ್ಷ ಪಿ.ಕೆ.ರವಿ, ಭಾರತಿ ಗ್ಲೋಬಲ್ ಎಜುಕೇಶನ್ ಸೊಸೈಟಿ ಅಧ್ಯಕ್ಷ</p>.<p>ಮಳ್ಳಂದಿರ ಕೃಷ್ಣರಾಜು, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯ ಪೂಳಕಂಡ ಸಂದೀಪ್, ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಬಾಳಾಡಿ ಮನೋಜ್ ಕುಮಾರ್, ಮಡಿಕೇರಿ ಗ್ರಾಮಾಂತರ ಪೊಲೀಸ್ ಸಿಬ್ಬಂದಿ ಮಹೇಶ್ ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260414-51-1358576526</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಡಿಕೇರಿ: ತಾಲ್ಲೂಕಿನ ಮರಗೋಡುವಿನ ಭಾರತಿ ಜೂನಿಯರ್ ಕಾಲೇಜು ಮೈದಾನದಲ್ಲಿ ಗೌಡ ಇವಿನಿಂಗ್ ಸ್ಟಾರ್ ವತಿಯಿಂದ ಸೋಮವಾರ ಆರಂಭವಾದ ಗೌಡ ಜನಾಂಗದ ಕುಟುಂಬವಾರು ಕ್ರಿಕೆಟ್ನಲ್ಲಿ ಉಳುವಾರನ ಪ್ರಿಕ್ವಾರ್ಟರ್ ತಲುಪಿ ಪಾರಮ್ಯ ಮೆರೆಯಿತು.</p>.<p>ಉಳುವಾರನ ತಂಡ 1 ವಿಕೆಟ್ ನಷ್ಟದಲ್ಲಿ 94 ರನ್ ಕಲೆ ಹಾಕಿದರೆ, ತುಂತಜೆ ತಂಡ 4 ವಿಕೆಟ್ ಕಳೆದುಕೊಂಡು ಕೇವಲ 21 ರನ್ ಮಾತ್ರ ಗಳಿಸಿತು. ಈ ಮೂಲಕ 73 ರನ್ಗಳ ಬೃಹತ್ ಅಂತರದ ಜಯವನ್ನು ಉಳುವಾರನ ತಂಡ ಪಡೆದುಕೊಂಡಿತು. ಮತ್ತೊಂದು ಪಂದ್ಯದಲ್ಲಿ ಹೊಸೂರು ತಂಡ 7 ವಿಕೆಟ್ಗೆ 46 ರನ್ ಗಳಿಸಿದರೆ ಉಳುವಾರನ ತಂಡ 1 ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿ ಪ್ರಿಕ್ವಾರ್ಟರ್ ಹಂತಕ್ಕೆ ಪ್ರವೇಶಿಸಿತು. ಉಳಿದಂತೆ, ತುಂತಜೆ, ಹೊಸೂರು, ತೇಲಬೈಲು ತಂಡಗಳು ಶುಭಾರಂಭ ಮಾಡಿದವು.</p>.<p>ಮೂಡಗದ್ದೆ ತಂಡ ನಿಗದಿತ 6 ಓವರ್ಗಳಲ್ಲಿ 3 ವಿಕೆಟ್ಗೆ 57 ರನ್ ಗಳಿಸಿದರೆ, ತುಂತಜೆ ತಂಡ ಒಂದು ವಿಕೆಟ್ ನಷ್ಟದಲ್ಲಿ 60 ಗಳಿಸಿ ಗುರಿ ಸಾಧಿಸಿತು.</p>.<p>ಹೊಸೂರು ತಂಡ 4 ವಿಕೆಟ್ಗೆ 50 ರನ್ ಕಲೆ ಹಾಕಿದರೆ, ಕಾಂಗಿರ ತಂಡ 7 ವಿಕೆಟ್ ಕಳೆದುಕೊಂಡು 34 ರನ್ ಮಾತ್ರ ಗಳಿಸಿ ಸೋಲನುಭವಿಸಿತು. ತೇಲಬೈಲು ತಂಡ 6 ವಿಕೆಟ್ಗೆ 57 ರನ್ ಗಳಿಸಿದರೆ, ಕೈಕೇರಿ ಮುಕ್ಕಾಟಿ ತಂಡ 6 ವಿಕೆಟ್ಗೆ 49 ರನ್ ಗಳಿಸಿ ಸೋಲನುಭವಿಸಿತು.</p>.<p>ಹೊಸೂರು ತಂಡ 2 ವಿಕೆಟ್ಗೆ 77 ರನ್ ಗಳಿಸಿದರೆ, ತೇಲಬೈಲು ತಂಡ 7 ವಿಕೆಟ್ ಕಳೆದುಕೊಂಡು 50ರನ್ ಮಾತ್ರ ಗಳಿಸಿ 27 ರನ್ಗಳ ಅಂತರದಿಂದ ಸೋಲನುಭವಿಸಿತು. ಮುಕ್ಕಾಟಿ ತಂಡ 7 ವಿಕೆಟ್ಗೆ 24 ರನ್ ಗಳಿಸಿದರೆ, ಬೈಮನ ತಂಡ 5 ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು.</p>.<p>ಇದಕ್ಕೂ ಮುನ್ನ ನಡೆದ ಪ್ರದರ್ಶನ ಪಂದ್ಯದಲ್ಲ ಸ್ಥಳೀಯ ಆತಿಥೇಯ ಗೌಡ ಇವಿನಿಂಗ್ ಸ್ಟಾರ್ ತಂಡದ ವಿರುದ್ಧ ಕೊಡಗು ಪತ್ರಕರ್ತರ ತಂಡ ಜಯ ಸಾಧಿಸಿತು.</p>.<p>ಇದಕ್ಕೂ ಮುನ್ನ ಪಂದ್ಯಾವಳಿ ಉದ್ಘಾಟಿಸಿದ ಮ್ಯಾರಥಾನ್ ಓಟಗಾರ ಹೊಸೋಕ್ಲು ಚಿಣ್ಣಪ್ಪ, ‘ಕ್ರೀಡಾಪಟುಗಳು ಯಾವದೇ ಬೇಧ ಭಾವವಿಲ್ಲದೆ ಎಲ್ಲರೂ ಒಗ್ಗಟ್ಟನ್ನು ಪ್ರದರ್ಶಿಸಬೇಕು’ ಎಂದು ಹೇಳಿದರು.</p>.<p>ಇವಿನಿಂಗ್ ಸ್ಟಾರ್ ಅಧ್ಯಕ್ಷ ಕಟ್ಟೆಮನೆ ರೋಷನ್, ಒಕ್ಕಲಿಗರ ಸಂಘದ ಉಪಾಧ್ಯಕ್ಷ ಪಿ.ಕೆ.ರವಿ, ಭಾರತಿ ಗ್ಲೋಬಲ್ ಎಜುಕೇಶನ್ ಸೊಸೈಟಿ ಅಧ್ಯಕ್ಷ</p>.<p>ಮಳ್ಳಂದಿರ ಕೃಷ್ಣರಾಜು, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯ ಪೂಳಕಂಡ ಸಂದೀಪ್, ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಬಾಳಾಡಿ ಮನೋಜ್ ಕುಮಾರ್, ಮಡಿಕೇರಿ ಗ್ರಾಮಾಂತರ ಪೊಲೀಸ್ ಸಿಬ್ಬಂದಿ ಮಹೇಶ್ ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260414-51-1358576526</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>