<p>ಮಲ್ಹಾರ(ಸೈದಾಪುರ): ‘ಆಟಗಾರರು ಕ್ರೀಡಾ ನಿಯಮಗಳಿಗೆ ಬದ್ಧರಾಗಬೇಕು. ಇಲ್ಲಿ ಸೋಲು – ಗೆಲುವು ಮುಖ್ಯವಲ್ಲ, ಕ್ರೀಡಾ ಸ್ಫೂರ್ತಿಯೊಂದಿಗೆ ಭಾಗವಹಿಸುವುದು ಅವಶ್ಯವಿದೆ’ ಎಂದು ರವಿಂದ್ರಗೌಡ ಕಾರಡ್ಡಿ ಮಲ್ಹಾರ ಹೇಳಿದರು.</p>.<p>ಸಮೀಪದ ಮಲ್ಹಾರ ಗ್ರಾಮದಲ್ಲಿ ಆಯೋಜಿಸಲಾಗಿದ್ದ ‘ಮಲ್ಹಾರ ಪ್ರೀಮಿಯರ್ ಲೀಗ್’ಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಆಟಗಾರರು ವಿನಾಕಾರಣ ಮನಸ್ತಾಪ ಮಾಡಿಕೊಳ್ಳದೆ ಸ್ನೇಹ, ಸಹೋದರತ್ವ ಭಾವದೊಂದಿಗೆ ಆಟವಾಡಬೇಕು. ಇಂದಿನ ಸೋಲು ನಾಳೆಯ ಗೆಲುವಿಗೆ ಅಡಿಪಾಯವಾಗಬಹುದು’ ಎಂದರು.</p>.<p>‘ಕ್ರೀಡೆಯ ಜತೆಗೆ ಮಲ್ಹಾರ ಗ್ರಾಮದ ಯುವಕರು ಉತ್ತಮವಾಗಿ ವಿದ್ಯಾಭ್ಯಾಸ ಮಾಡುವ ಮೂಲಕ ಸರ್ಕಾರಿ ನೌಕರಿ ಹಾಗೂ ಎಂಬಿಬಿಎಸ್, ಎಂಜಿನಿಯರ್ನಂತಹ ಕೋರ್ಸ್ಗಳಿಗೆ ಸೇರಿಕೊಂಡು ಗ್ರಾಮದ ಕೀರ್ತಿ ಹೆಚ್ಚಿಸಬೇಕು’ ಎಂದರು.</p>.<p>ಪಂದ್ಯಾವಳಿಯಲ್ಲಿ ಮಲ್ಹಾರ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳು ಹಾಗೂ ತಾಂಡಾಗಳ ತಂಡಗಳು ಭಾಗವಹಿಸಿದ್ದವು. ಎಲ್ಲ ಆಟಗಾರರಿಗೆ ರವಿಂದ್ರಗೌಡ ಕಾರಡ್ಡಿ ಅವರು ಸುಮಾರು ₹ 50 ಸಾವಿರ ಖರ್ಚು ಮಾಡಿ ಟಿ–ಶರ್ಟ್ ಮತ್ತು ಸ್ಪೋರ್ಟ್ಸ್ ಪ್ಯಾಂಟ್ ವಿತರಿಸಿ ಕ್ರೀಡಾಸ್ಫೂರ್ತಿ ಮೆರೆದರು.</p>.<p>ಇದೇ ಸಂದರ್ಭದಲ್ಲಿ ಸಂಘಟಕರು ಮಾತನಾಡಿ, ‘ಪಂದ್ಯಾವಳಿಯ ವಿಜೇತ ತಂಡಕ್ಕೆ ಶರಣಪ್ಪಗೌಡ ಕೌಳೂರು, ಬಸ್ಸುಗೌಡ ಕಾರಡ್ಡಿ, ಮಹದೇವಪ್ಪ ಬಾಗ್ಲಿ, ವಗ್ಗಯ್ಯ ವಗ್ಗಯ್ಯನೋರ್, ಮಲ್ಲಮ್ಮ ಕೋಮಾರ ಹಾಗೂ ಸುರೇಶ ದೊಡ್ಡಮನಿ ಅವರಿಂದ ಆಕರ್ಷಕ ನಗದು ಬಹುಮಾನ ಇರಲಿದೆ’ ಎಂದು ಮಾಹಿತಿ ನೀಡಿದರು</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260416-30-698065779</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಲ್ಹಾರ(ಸೈದಾಪುರ): ‘ಆಟಗಾರರು ಕ್ರೀಡಾ ನಿಯಮಗಳಿಗೆ ಬದ್ಧರಾಗಬೇಕು. ಇಲ್ಲಿ ಸೋಲು – ಗೆಲುವು ಮುಖ್ಯವಲ್ಲ, ಕ್ರೀಡಾ ಸ್ಫೂರ್ತಿಯೊಂದಿಗೆ ಭಾಗವಹಿಸುವುದು ಅವಶ್ಯವಿದೆ’ ಎಂದು ರವಿಂದ್ರಗೌಡ ಕಾರಡ್ಡಿ ಮಲ್ಹಾರ ಹೇಳಿದರು.</p>.<p>ಸಮೀಪದ ಮಲ್ಹಾರ ಗ್ರಾಮದಲ್ಲಿ ಆಯೋಜಿಸಲಾಗಿದ್ದ ‘ಮಲ್ಹಾರ ಪ್ರೀಮಿಯರ್ ಲೀಗ್’ಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಆಟಗಾರರು ವಿನಾಕಾರಣ ಮನಸ್ತಾಪ ಮಾಡಿಕೊಳ್ಳದೆ ಸ್ನೇಹ, ಸಹೋದರತ್ವ ಭಾವದೊಂದಿಗೆ ಆಟವಾಡಬೇಕು. ಇಂದಿನ ಸೋಲು ನಾಳೆಯ ಗೆಲುವಿಗೆ ಅಡಿಪಾಯವಾಗಬಹುದು’ ಎಂದರು.</p>.<p>‘ಕ್ರೀಡೆಯ ಜತೆಗೆ ಮಲ್ಹಾರ ಗ್ರಾಮದ ಯುವಕರು ಉತ್ತಮವಾಗಿ ವಿದ್ಯಾಭ್ಯಾಸ ಮಾಡುವ ಮೂಲಕ ಸರ್ಕಾರಿ ನೌಕರಿ ಹಾಗೂ ಎಂಬಿಬಿಎಸ್, ಎಂಜಿನಿಯರ್ನಂತಹ ಕೋರ್ಸ್ಗಳಿಗೆ ಸೇರಿಕೊಂಡು ಗ್ರಾಮದ ಕೀರ್ತಿ ಹೆಚ್ಚಿಸಬೇಕು’ ಎಂದರು.</p>.<p>ಪಂದ್ಯಾವಳಿಯಲ್ಲಿ ಮಲ್ಹಾರ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳು ಹಾಗೂ ತಾಂಡಾಗಳ ತಂಡಗಳು ಭಾಗವಹಿಸಿದ್ದವು. ಎಲ್ಲ ಆಟಗಾರರಿಗೆ ರವಿಂದ್ರಗೌಡ ಕಾರಡ್ಡಿ ಅವರು ಸುಮಾರು ₹ 50 ಸಾವಿರ ಖರ್ಚು ಮಾಡಿ ಟಿ–ಶರ್ಟ್ ಮತ್ತು ಸ್ಪೋರ್ಟ್ಸ್ ಪ್ಯಾಂಟ್ ವಿತರಿಸಿ ಕ್ರೀಡಾಸ್ಫೂರ್ತಿ ಮೆರೆದರು.</p>.<p>ಇದೇ ಸಂದರ್ಭದಲ್ಲಿ ಸಂಘಟಕರು ಮಾತನಾಡಿ, ‘ಪಂದ್ಯಾವಳಿಯ ವಿಜೇತ ತಂಡಕ್ಕೆ ಶರಣಪ್ಪಗೌಡ ಕೌಳೂರು, ಬಸ್ಸುಗೌಡ ಕಾರಡ್ಡಿ, ಮಹದೇವಪ್ಪ ಬಾಗ್ಲಿ, ವಗ್ಗಯ್ಯ ವಗ್ಗಯ್ಯನೋರ್, ಮಲ್ಲಮ್ಮ ಕೋಮಾರ ಹಾಗೂ ಸುರೇಶ ದೊಡ್ಡಮನಿ ಅವರಿಂದ ಆಕರ್ಷಕ ನಗದು ಬಹುಮಾನ ಇರಲಿದೆ’ ಎಂದು ಮಾಹಿತಿ ನೀಡಿದರು</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260416-30-698065779</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>