<p>ಮೈಸೂರು: ‘ಆದಿದ್ರಾವಿಡ ಬಾಯ್ಸ್’ ತಂಡದವರು ‘ಎಂಪಿಎಲ್–2026’ ಕ್ರಿಕೆಟ್ ಟೂರ್ನಿಯ ಟ್ರೋಫಿ ತಮ್ಮದಾಗಿಸಿಕೊಂಡರು. ₹ 60ಸಾವಿರ ಬಹುಮಾನ ಹಾಗೂ ಟ್ರೋಫಿ ವಿತರಿಸಲಾಯಿತು.</p>.<p>ಇಲ್ಲಿನ ಜೆ.ಪಿ. ನಗರ, ನವೋದಯ ಬಡಾವಣೆ, ವಿದ್ಯಾರಣ್ಯಪುರಂನ ಜೈ ಭೀಮ್ ಲೆಜೆಂಡ್ಸ್ ಮತ್ತು ಜೈ ಭೀಮ್ ಫ್ರೆಂಡ್ಸ್ ವತಿಯಿಂದ ಮೈಸೂರು ಪ್ರೀಮಿಯರ್ ಲೀಗ್– 2026 ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿ ಜೆ.ಪಿ. ನಗರದ ಪುಟ್ಟರಾಜ ಗವಾಯಿ ಕ್ರೀಡಾಂಗಣದಲ್ಲಿ ನಡೆಯಿತು.</p>.<p>2ನೇ ಬಹುಮಾನವನ್ನು ಸಿಲ್ಕ್ ಫ್ಯಾಕ್ಟರಿ ಬಾಯ್ಸ್ (₹ 40ಸಾವಿರ ಬಹುಮಾನ ಮತ್ತು ಟ್ರೋಫಿ), 3ನೇ ಬಹುಮಾನವನ್ನು ಡ್ರ್ಯಾಗನ್ ಬಾಯ್ಸ್ (₹ 20ಸಾವಿರ ಮತ್ತು ಟ್ರೋಫಿ) ತಂಡ ಪಡೆದುಕೊಂಡಿತು.</p>.<p>ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ವಿಜೇತ ತಂಡಗಳಿಗೆ ಟ್ರೋಫಿ ವಿತರಿಸಿದರು.</p>.<p>ಮಾಜಿ ಮೇಯರ್ ಬಿ.ಎಲ್. ಭೈರಪ್ಪ, ಮುಖಂಡರಾದ ವೆಂಕಟೇಶ್, ಜಯರಾಂ ನಾರಾಯಣ್, ಕುಮಾರಸ್ವಾಮಿ, ವಿನಯ್, ರಘು, ಹರ್ಷಿತ್, ವರುಣ್, ಶಶಿ, ಸುರೇಶ್, ಮನೋಜ್ ಪಾಲ್ಗೊಂಡಿದ್ದರು.</p>.<p>ಅಶೋಕಪುರಂ ಲೀಗ್: ಅಶೋಕಪುರಂ ಮಹದೇಶ್ವರ ಯೂತ್ ವತಿಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಕ್ರೀಡಾಂಗಣ (ಎನ್ಐಇ)ದಲ್ಲಿ ನಡೆದ ಅಶೋಕಪುರಂ ಲೀಗ್–2026 ಕ್ರಿಕೆಟ್ ಟೂರ್ನಿಯಲ್ಲಿ ಜೆ.ಕೆ. ಗ್ರೂಪ್ಸ್ ತಂಡ ಪ್ರಥಮ ಬಹುಮಾನ (₹ 1ಲಕ್ಷ ಬಹುಮಾನ ಮತ್ತು ಟ್ರೋಫಿ) ಪಡೆಯಿತು.</p>.<p>ಎ.ಪಿ ಥಂಡರ್ಸ್ ತಂಡ ದ್ವಿತೀಯ ಬಹುಮಾನ ₹ 50ಸಾವಿರ ಬಹುಮಾನ ಮತ್ತು ಟ್ರೋಫಿ, ಎ.ಪಿ. ಪ್ಯಾಂಥರ್ಸ್ ತಂಡ ತೃತೀಯ ಬಹುಮಾನ ₹ 25ಸಾವಿರ ಬಹುಮಾನ ಮತ್ತು ಟ್ರೋಫಿ ಗಳಿಸಿತು.</p>.<p>ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಅವರು ವಿಜೇತ ತಂಡಗಳಿಗೆ ಟ್ರೋಫಿ ವಿತರಿಸಿದರು. ಮಾಜಿ ಮೇಯರ್ ಪುರುಷೋತ್ತಮ್, ಮುಖಂಡರಾದ ಆರ್.ಸಿ. ಜೋಗಿ ಮಹೇಶ್, ಮುಖಂಡರಾದ ಪಿ.ಟಿ. ಕೃಷ್ಣ, ಗುರು, ಹರಿದಾಸ್, ಆದರ್ಶ ಭೀಮ್, ಮನು, ನಾಗೇಂದ್ರ, ಹರಿ, ಚೇತನ್ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260505-39-700703479</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ‘ಆದಿದ್ರಾವಿಡ ಬಾಯ್ಸ್’ ತಂಡದವರು ‘ಎಂಪಿಎಲ್–2026’ ಕ್ರಿಕೆಟ್ ಟೂರ್ನಿಯ ಟ್ರೋಫಿ ತಮ್ಮದಾಗಿಸಿಕೊಂಡರು. ₹ 60ಸಾವಿರ ಬಹುಮಾನ ಹಾಗೂ ಟ್ರೋಫಿ ವಿತರಿಸಲಾಯಿತು.</p>.<p>ಇಲ್ಲಿನ ಜೆ.ಪಿ. ನಗರ, ನವೋದಯ ಬಡಾವಣೆ, ವಿದ್ಯಾರಣ್ಯಪುರಂನ ಜೈ ಭೀಮ್ ಲೆಜೆಂಡ್ಸ್ ಮತ್ತು ಜೈ ಭೀಮ್ ಫ್ರೆಂಡ್ಸ್ ವತಿಯಿಂದ ಮೈಸೂರು ಪ್ರೀಮಿಯರ್ ಲೀಗ್– 2026 ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿ ಜೆ.ಪಿ. ನಗರದ ಪುಟ್ಟರಾಜ ಗವಾಯಿ ಕ್ರೀಡಾಂಗಣದಲ್ಲಿ ನಡೆಯಿತು.</p>.<p>2ನೇ ಬಹುಮಾನವನ್ನು ಸಿಲ್ಕ್ ಫ್ಯಾಕ್ಟರಿ ಬಾಯ್ಸ್ (₹ 40ಸಾವಿರ ಬಹುಮಾನ ಮತ್ತು ಟ್ರೋಫಿ), 3ನೇ ಬಹುಮಾನವನ್ನು ಡ್ರ್ಯಾಗನ್ ಬಾಯ್ಸ್ (₹ 20ಸಾವಿರ ಮತ್ತು ಟ್ರೋಫಿ) ತಂಡ ಪಡೆದುಕೊಂಡಿತು.</p>.<p>ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ವಿಜೇತ ತಂಡಗಳಿಗೆ ಟ್ರೋಫಿ ವಿತರಿಸಿದರು.</p>.<p>ಮಾಜಿ ಮೇಯರ್ ಬಿ.ಎಲ್. ಭೈರಪ್ಪ, ಮುಖಂಡರಾದ ವೆಂಕಟೇಶ್, ಜಯರಾಂ ನಾರಾಯಣ್, ಕುಮಾರಸ್ವಾಮಿ, ವಿನಯ್, ರಘು, ಹರ್ಷಿತ್, ವರುಣ್, ಶಶಿ, ಸುರೇಶ್, ಮನೋಜ್ ಪಾಲ್ಗೊಂಡಿದ್ದರು.</p>.<p>ಅಶೋಕಪುರಂ ಲೀಗ್: ಅಶೋಕಪುರಂ ಮಹದೇಶ್ವರ ಯೂತ್ ವತಿಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಕ್ರೀಡಾಂಗಣ (ಎನ್ಐಇ)ದಲ್ಲಿ ನಡೆದ ಅಶೋಕಪುರಂ ಲೀಗ್–2026 ಕ್ರಿಕೆಟ್ ಟೂರ್ನಿಯಲ್ಲಿ ಜೆ.ಕೆ. ಗ್ರೂಪ್ಸ್ ತಂಡ ಪ್ರಥಮ ಬಹುಮಾನ (₹ 1ಲಕ್ಷ ಬಹುಮಾನ ಮತ್ತು ಟ್ರೋಫಿ) ಪಡೆಯಿತು.</p>.<p>ಎ.ಪಿ ಥಂಡರ್ಸ್ ತಂಡ ದ್ವಿತೀಯ ಬಹುಮಾನ ₹ 50ಸಾವಿರ ಬಹುಮಾನ ಮತ್ತು ಟ್ರೋಫಿ, ಎ.ಪಿ. ಪ್ಯಾಂಥರ್ಸ್ ತಂಡ ತೃತೀಯ ಬಹುಮಾನ ₹ 25ಸಾವಿರ ಬಹುಮಾನ ಮತ್ತು ಟ್ರೋಫಿ ಗಳಿಸಿತು.</p>.<p>ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಅವರು ವಿಜೇತ ತಂಡಗಳಿಗೆ ಟ್ರೋಫಿ ವಿತರಿಸಿದರು. ಮಾಜಿ ಮೇಯರ್ ಪುರುಷೋತ್ತಮ್, ಮುಖಂಡರಾದ ಆರ್.ಸಿ. ಜೋಗಿ ಮಹೇಶ್, ಮುಖಂಡರಾದ ಪಿ.ಟಿ. ಕೃಷ್ಣ, ಗುರು, ಹರಿದಾಸ್, ಆದರ್ಶ ಭೀಮ್, ಮನು, ನಾಗೇಂದ್ರ, ಹರಿ, ಚೇತನ್ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260505-39-700703479</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>