<p>ನಾಪೋಕ್ಲು: ಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೇನಂಡ ಕೊಡವ ಕೌಟುಂಬಿಕ ಹಾಕಿ ಟೂರ್ನಿಯಲ್ಲಿ ಭಾನುವಾರ ಮಧ್ಯಾಹ್ನದವರೆಗೆ ಉರಿಬಿಸಿಲು ಇದ್ದರೆ, ಮಧ್ಯಾಹ್ನದ ನಂತರ ಸುರಿದ ಮಳೆ ತಂಪನೆರೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಪಂದ್ಯ ವೀಕ್ಷಿಸಲು ಆಗಮಿಸಿದ್ದರು.</p>.<p>ಮಳೆಯಿಂದಾಗಿ ಕೆಲವು ಪಂದ್ಯಗಳನ್ನು ಮುಂದೂಡಲಾಯಿತು. ಆದರೆ, ಮಳೆಯಿಂದ ಬಿಸಿಲ ಬೇಗೆ ಕೊಂಚ ತಣಿಯಿತು. ಭಾನುವಾರದ ಪಂದ್ಯಗಳಲ್ಲಿ ಪೂಣಚ್ಚ ಹಾಗೂ ಲೇಖನ್ ಅಪ್ಪಚ್ಚು ಅವರು ತಲಾ 3 ಗೋಲು ಗಳಿಸಿ ಮಿಂಚಿದರು. ಮಾತ್ರವಲ್ಲ, ತಮ್ಮ ತಮ್ಮ ತಂಡಗಳ ಗೆಲುವಿಗೆ ಕಾರಣರಾದರು.</p>.<p>ಪೂಣಚ್ಚ ಅವರ 3 ಹಾಗೂ ತರುಣ್ ಮಾಚಯ್ಯ ಅವರ ಒಂದು ಗೋಲಿನಿಂದ ನೆರವಿನಿಂದ ಮುಕ್ಕಾಟಿರ (ಪುಲಿಕೋಟು ) 4-1ರಿಂದ ಶಾಂತೆಯಂಡ ವಿರುದ್ಧದ ಪಂದ್ಯದಲ್ಲಿ ಜಯ ಗಳಿಸಿತು.</p>.<p>ಇದೇ ರೀತಿ ಲೇಖನ್ ಅಪ್ಪಚ್ಚು ಅವರು ಗಳಿಸಿದ 3 ಗೋಲುಗಳು ಹಾಗೂ ಗೌತಮ್ ಗಳಿಸಿದ 1 ಗೋಲಿನ ನೆರವಿನಿಂದ ಕೊಲ್ಲಿರ 4-1ಯಿಂದ ಚೆಂಗಲಂಡ ವಿರುದ್ಧ ಜಯ ಸಾಧಿಸಿತು.</p>.<p>ಇನ್ನು ಪ್ರೇಕ್ಷಕರ ಭಾರಿ ಕುತೂಹಲಕ್ಕೆ ಕರೋಟಿರ ಮತ್ತು ನಾಯಕಂಡ, ಮುಕ್ಕಾಟಿರ (ಮೂವತ್ತೊಕ್ಲು) –ಮಾಚಂಡ ಹಾಗೂ ನಾಗಂಡ– ತೀತಿಮಾಡ ಪಂದ್ಯಗಳು ಕಾರಣವಾಗಿದ್ದವು.</p>.<p>ಅಂತಿಮವಾಗಿ ಟೈಬ್ರೇಕರ್ನಲ್ಲಿ ಕರೋಟಿರ 5–4ರಿಂದ ನಾಯಕಂಡ ವಿರುದ್ಧ; ಮುಕ್ಕಾಟಿರ (ಮೂವತ್ತೊಕ್ಲು) 2-1 ರಿಂದ ಮಾಚಂಡ ವಿರುದ್ಧ ಹಾಗೂ ನಾಗಂಡ 2-0 ರಿಂದ ತೀತಿಮಾಡ ವಿರುದ್ಧ ಗೆಲುವು ಸಾಧಿಸುವಲ್ಲಿ ಸಫಲವಾದವು.</p>.<p>ಉಳಿದಂತೆ, ಚಂದುರ 1-0 ರಿಂದ ಮಾಚಮಂಡ ವಿರುದ್ಧ; ಅಪ್ಪನೆರವಂಡ 3-2ರಿಂದ ಚಿಂಡಮಾಡ ವಿರುದ್ಧ; ಬಿದ್ದಾಟಂಡ 4-0ರಿಂದ ಮಲ್ಲಜ್ಜಿರ ವಿರುದ್ಧ; ಮಣವಟ್ಟಿರ 3-1ರಿಂದ ಅಲ್ಲಪಂಡ ವಿರುದ್ಧ; ನಾಪಂಡ 2-0ಯಿಂದ ಚೌರೀರ ವಿರುದ್ಧ; ಸೋಮೆಯಂಡ 3-0ಯಿಂದ ಮಳವಂಡ ವಿರುದ್ಧ ಹಾಗೂ ನೆರವಂಡ 4-0ಯಿಂದ ಮಾದೆಯಂಡ ವಿರುದ್ಧ ಗೆಲುವು ಪಡೆದವು. ಮುಕ್ಕಾಟಿರ (ಹರಿಹರ ) 2-0 ಅಂತರದಿಂದ ಐತಿಚಂಡ ವಿರುದ್ಧ; ಬೊಟ್ಟೋಳಂಡ 1-0ರಿಂದ ಸುಳ್ಳಿಮಾಡ ವಿರುದ್ಧ; ಅರಮನೆಮಾಡ 1-0ರಿಂದ ಉದ್ದಿನಡಂಡ ವಿರುದ್ಧ; ನಂದೇಟಿರ 1-0ರಿಂದ ಪಾಲೆಕಂಡ ವಿರುದ್ಧ ಗೆಲುವು ಸಾಧಿಸಿದವು.</p>.<p>ಮಧ್ಯಾಹ್ನದವರೆಗಿನ ಬಿಸಿಲು ಪಂದ್ಯಗಳ ಕಾವನ್ನು ಹೆಚ್ಚಿಸಿದರೆ ಮಧ್ಯಾಹ್ನ ಸುರಿದ ಮಳೆ ಐದು ಪಂದ್ಯಗಳಿಗೆ ಅಡ್ಡಿಯಾಯಿತು. ತಂಡಗಳ ನಡುವಿನ ಪಂದ್ಯಗಳು ಏಪ್ರಿಲ್ 21ರಂದು ನಡೆಯಲಿವೆ ಎಂದು ಕ್ರೀಡಾಕೂಟದ ನಿರ್ದೇಶಕ ನಾಯಕಂಡ ದೀಪುಚಂಗಪ್ಪ ತಿಳಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260420-51-529224575</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಾಪೋಕ್ಲು: ಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೇನಂಡ ಕೊಡವ ಕೌಟುಂಬಿಕ ಹಾಕಿ ಟೂರ್ನಿಯಲ್ಲಿ ಭಾನುವಾರ ಮಧ್ಯಾಹ್ನದವರೆಗೆ ಉರಿಬಿಸಿಲು ಇದ್ದರೆ, ಮಧ್ಯಾಹ್ನದ ನಂತರ ಸುರಿದ ಮಳೆ ತಂಪನೆರೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಪಂದ್ಯ ವೀಕ್ಷಿಸಲು ಆಗಮಿಸಿದ್ದರು.</p>.<p>ಮಳೆಯಿಂದಾಗಿ ಕೆಲವು ಪಂದ್ಯಗಳನ್ನು ಮುಂದೂಡಲಾಯಿತು. ಆದರೆ, ಮಳೆಯಿಂದ ಬಿಸಿಲ ಬೇಗೆ ಕೊಂಚ ತಣಿಯಿತು. ಭಾನುವಾರದ ಪಂದ್ಯಗಳಲ್ಲಿ ಪೂಣಚ್ಚ ಹಾಗೂ ಲೇಖನ್ ಅಪ್ಪಚ್ಚು ಅವರು ತಲಾ 3 ಗೋಲು ಗಳಿಸಿ ಮಿಂಚಿದರು. ಮಾತ್ರವಲ್ಲ, ತಮ್ಮ ತಮ್ಮ ತಂಡಗಳ ಗೆಲುವಿಗೆ ಕಾರಣರಾದರು.</p>.<p>ಪೂಣಚ್ಚ ಅವರ 3 ಹಾಗೂ ತರುಣ್ ಮಾಚಯ್ಯ ಅವರ ಒಂದು ಗೋಲಿನಿಂದ ನೆರವಿನಿಂದ ಮುಕ್ಕಾಟಿರ (ಪುಲಿಕೋಟು ) 4-1ರಿಂದ ಶಾಂತೆಯಂಡ ವಿರುದ್ಧದ ಪಂದ್ಯದಲ್ಲಿ ಜಯ ಗಳಿಸಿತು.</p>.<p>ಇದೇ ರೀತಿ ಲೇಖನ್ ಅಪ್ಪಚ್ಚು ಅವರು ಗಳಿಸಿದ 3 ಗೋಲುಗಳು ಹಾಗೂ ಗೌತಮ್ ಗಳಿಸಿದ 1 ಗೋಲಿನ ನೆರವಿನಿಂದ ಕೊಲ್ಲಿರ 4-1ಯಿಂದ ಚೆಂಗಲಂಡ ವಿರುದ್ಧ ಜಯ ಸಾಧಿಸಿತು.</p>.<p>ಇನ್ನು ಪ್ರೇಕ್ಷಕರ ಭಾರಿ ಕುತೂಹಲಕ್ಕೆ ಕರೋಟಿರ ಮತ್ತು ನಾಯಕಂಡ, ಮುಕ್ಕಾಟಿರ (ಮೂವತ್ತೊಕ್ಲು) –ಮಾಚಂಡ ಹಾಗೂ ನಾಗಂಡ– ತೀತಿಮಾಡ ಪಂದ್ಯಗಳು ಕಾರಣವಾಗಿದ್ದವು.</p>.<p>ಅಂತಿಮವಾಗಿ ಟೈಬ್ರೇಕರ್ನಲ್ಲಿ ಕರೋಟಿರ 5–4ರಿಂದ ನಾಯಕಂಡ ವಿರುದ್ಧ; ಮುಕ್ಕಾಟಿರ (ಮೂವತ್ತೊಕ್ಲು) 2-1 ರಿಂದ ಮಾಚಂಡ ವಿರುದ್ಧ ಹಾಗೂ ನಾಗಂಡ 2-0 ರಿಂದ ತೀತಿಮಾಡ ವಿರುದ್ಧ ಗೆಲುವು ಸಾಧಿಸುವಲ್ಲಿ ಸಫಲವಾದವು.</p>.<p>ಉಳಿದಂತೆ, ಚಂದುರ 1-0 ರಿಂದ ಮಾಚಮಂಡ ವಿರುದ್ಧ; ಅಪ್ಪನೆರವಂಡ 3-2ರಿಂದ ಚಿಂಡಮಾಡ ವಿರುದ್ಧ; ಬಿದ್ದಾಟಂಡ 4-0ರಿಂದ ಮಲ್ಲಜ್ಜಿರ ವಿರುದ್ಧ; ಮಣವಟ್ಟಿರ 3-1ರಿಂದ ಅಲ್ಲಪಂಡ ವಿರುದ್ಧ; ನಾಪಂಡ 2-0ಯಿಂದ ಚೌರೀರ ವಿರುದ್ಧ; ಸೋಮೆಯಂಡ 3-0ಯಿಂದ ಮಳವಂಡ ವಿರುದ್ಧ ಹಾಗೂ ನೆರವಂಡ 4-0ಯಿಂದ ಮಾದೆಯಂಡ ವಿರುದ್ಧ ಗೆಲುವು ಪಡೆದವು. ಮುಕ್ಕಾಟಿರ (ಹರಿಹರ ) 2-0 ಅಂತರದಿಂದ ಐತಿಚಂಡ ವಿರುದ್ಧ; ಬೊಟ್ಟೋಳಂಡ 1-0ರಿಂದ ಸುಳ್ಳಿಮಾಡ ವಿರುದ್ಧ; ಅರಮನೆಮಾಡ 1-0ರಿಂದ ಉದ್ದಿನಡಂಡ ವಿರುದ್ಧ; ನಂದೇಟಿರ 1-0ರಿಂದ ಪಾಲೆಕಂಡ ವಿರುದ್ಧ ಗೆಲುವು ಸಾಧಿಸಿದವು.</p>.<p>ಮಧ್ಯಾಹ್ನದವರೆಗಿನ ಬಿಸಿಲು ಪಂದ್ಯಗಳ ಕಾವನ್ನು ಹೆಚ್ಚಿಸಿದರೆ ಮಧ್ಯಾಹ್ನ ಸುರಿದ ಮಳೆ ಐದು ಪಂದ್ಯಗಳಿಗೆ ಅಡ್ಡಿಯಾಯಿತು. ತಂಡಗಳ ನಡುವಿನ ಪಂದ್ಯಗಳು ಏಪ್ರಿಲ್ 21ರಂದು ನಡೆಯಲಿವೆ ಎಂದು ಕ್ರೀಡಾಕೂಟದ ನಿರ್ದೇಶಕ ನಾಯಕಂಡ ದೀಪುಚಂಗಪ್ಪ ತಿಳಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260420-51-529224575</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>