<p>ರಬಕವಿ ಬನಹಟ್ಟಿ: ಕ್ರೀಡೆ ಕೇವಲ ಮನರಂಜನೆ ಅಲ್ಲ, ಅದು ಯುವಕರಲ್ಲಿ ಆತ್ಮವಿಶ್ವಾಸ, ಶಿಸ್ತು, ಸಹನೆ ಹಾಗೂ ಸಾಮರಸ್ಯದ ಗುಣಗಳನ್ನು ಕಲಿಸಿಕೊಡುತ್ತದೆ ಎಂದು ರಬಕವಿ ಬನಹಟ್ಟಿ ನಗರದ ಯುವ ಮುಖಂಡ ವಿದ್ಯಾಧರ ಸವದಿ ತಿಳಿಸಿದರು.</p>.<p>ಅವರು ಬುಧವಾರ ಸ್ಥಳೀಯ ಎಸ್ಆರ್ಎ ಮೈದಾನದಲ್ಲಿ ಬಿಎಸ್ವೈ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.</p>.<p>ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಕ್ರೀಡಾಪಟುಗಳು ಇದ್ದು, ಅವರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ನಡೆಯಬೇಕಾಗಿದೆ. ಕ್ರೀಡೆಯಿಂದ ಉತ್ತಮ ವ್ಯಕ್ತಿತ್ವವನ್ನು ನಿರ್ಮಾಣ ಮಾಡಿಕೊಳ್ಳಬಹುದಾಗಿದೆ. ಎಸ್ಕೆಎಸ್ ಕ್ಲಬ್ ಈ ಭಾಗದಲ್ಲಿ ವಿವಿಧ ಕ್ರೀಡೆಗಳಲ್ಲಿಯ ಪ್ರತಿಭಾವಂತರನ್ನು ಗುರುತಿಸುವ ಕಾರ್ಯ ಮಾಡುತ್ತಿದೆ ಎಂದು ಸವದಿ ತಿಳಿಸಿದರು.</p>.<p>ನಗರದ ಹಿರಿಯರಾದ ಸುರೇಶ ಚಿಂಡಕ ಮಾತನಾಡಿ, ಇಂಥ ಕ್ರೀಡೆಗಳನ್ನು ಹಮ್ಮಿಕೊಳ್ಳುವುದರಿಂದ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂದರು.</p>.<p>ನಗರದ ಮುಖಂಡರಾದ ಶ್ರೀಶೈಲ ಧಬಾಡಿ, ಶ್ರೀಶೈಲ ಬೀಳಗಿ, ಶ್ರೀಶೈಲ ಯಾದವಾಡ, ಮಹಾದೇವ ದೂಪದಾಳ, ಚಿದಾನಂದ ಹೊರಟ್ಟಿ, ಗೋವಿಂದ ಡಾಗಾ, ಭೀಮಶಿ ಹಂದಿಗುಂದ, ಪವಿತ್ರಾ ತುಕ್ಕನ್ನವರ, ಸವಿತಾ ಹೊಸೂರ, ಗೌರಿ ಮಿಳ್ಳಿ, ಸುವರ್ಣಾ ಕೊಪ್ಪದ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260528-19-1908123466</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಬಕವಿ ಬನಹಟ್ಟಿ: ಕ್ರೀಡೆ ಕೇವಲ ಮನರಂಜನೆ ಅಲ್ಲ, ಅದು ಯುವಕರಲ್ಲಿ ಆತ್ಮವಿಶ್ವಾಸ, ಶಿಸ್ತು, ಸಹನೆ ಹಾಗೂ ಸಾಮರಸ್ಯದ ಗುಣಗಳನ್ನು ಕಲಿಸಿಕೊಡುತ್ತದೆ ಎಂದು ರಬಕವಿ ಬನಹಟ್ಟಿ ನಗರದ ಯುವ ಮುಖಂಡ ವಿದ್ಯಾಧರ ಸವದಿ ತಿಳಿಸಿದರು.</p>.<p>ಅವರು ಬುಧವಾರ ಸ್ಥಳೀಯ ಎಸ್ಆರ್ಎ ಮೈದಾನದಲ್ಲಿ ಬಿಎಸ್ವೈ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.</p>.<p>ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಕ್ರೀಡಾಪಟುಗಳು ಇದ್ದು, ಅವರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ನಡೆಯಬೇಕಾಗಿದೆ. ಕ್ರೀಡೆಯಿಂದ ಉತ್ತಮ ವ್ಯಕ್ತಿತ್ವವನ್ನು ನಿರ್ಮಾಣ ಮಾಡಿಕೊಳ್ಳಬಹುದಾಗಿದೆ. ಎಸ್ಕೆಎಸ್ ಕ್ಲಬ್ ಈ ಭಾಗದಲ್ಲಿ ವಿವಿಧ ಕ್ರೀಡೆಗಳಲ್ಲಿಯ ಪ್ರತಿಭಾವಂತರನ್ನು ಗುರುತಿಸುವ ಕಾರ್ಯ ಮಾಡುತ್ತಿದೆ ಎಂದು ಸವದಿ ತಿಳಿಸಿದರು.</p>.<p>ನಗರದ ಹಿರಿಯರಾದ ಸುರೇಶ ಚಿಂಡಕ ಮಾತನಾಡಿ, ಇಂಥ ಕ್ರೀಡೆಗಳನ್ನು ಹಮ್ಮಿಕೊಳ್ಳುವುದರಿಂದ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂದರು.</p>.<p>ನಗರದ ಮುಖಂಡರಾದ ಶ್ರೀಶೈಲ ಧಬಾಡಿ, ಶ್ರೀಶೈಲ ಬೀಳಗಿ, ಶ್ರೀಶೈಲ ಯಾದವಾಡ, ಮಹಾದೇವ ದೂಪದಾಳ, ಚಿದಾನಂದ ಹೊರಟ್ಟಿ, ಗೋವಿಂದ ಡಾಗಾ, ಭೀಮಶಿ ಹಂದಿಗುಂದ, ಪವಿತ್ರಾ ತುಕ್ಕನ್ನವರ, ಸವಿತಾ ಹೊಸೂರ, ಗೌರಿ ಮಿಳ್ಳಿ, ಸುವರ್ಣಾ ಕೊಪ್ಪದ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260528-19-1908123466</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>