<p>ಸುರಪುರ: ‘ವಯಸ್ಸಿನ ಅಂತರವಿಲ್ಲದೆ ಆಟವಾಡುವ ಕ್ರೀಡೆಯೆಂದರೆ ಕ್ರಿಕೆಟ್. ಜಾತಿ, ಧರ್ಮ, ಭಾಷೆ, ಪ್ರದೇಶ, ಬಡವ-ಶ್ರೀಮಂತ ಎಂಬ ಭೇದ ಮರೆತು ಎಲ್ಲರೂ ಸಹೋದರತೆಯಿಂದ ಆಡಬೇಕು’ ಎಂದು ಬಿ.ಬಿ. ಶಿವಣ್ಣ ಕಟ್ಟಿಮನಿ ಹೇಳಿದರು.</p>.<p>ನಗರದ ಬೆಟ್ಟದ ರತ್ನಮ್ಮ ದೇವಿಯ ಆವರಣದಲ್ಲಿ ನಡೆಯುತ್ತಿರುವ ಭೋವಿಗಲ್ಲಿ ಪ್ರೀಮಿಯರ್ ಲೀಗ್ ಸೀಸನ್–5ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>‘ಕ್ರೀಡೆ ಸಹೋದರತೆಯ ಗುಣವನ್ನು ಬೆಳೆಸುತ್ತದೆ. ಒಂದು ತಂಡದ ಎಲ್ಲ ಆಟಗಾರರು ಒಂದೇ ಸಮವಸ್ತ್ರ ಧರಿಸಿ ಆಡುವುದರಿಂದ ಮೇಲು–ಕೀಳಿಲ್ಲ ಎಂಬ ಭಾವನೆಯನ್ನು ಮೂಡಿಸುತ್ತದೆ. ಗೆಲ್ಲಲು 11 ಆಟಗಾರರು ಒಟ್ಟಾಗಿ ಒಂದೇ ಮನಸ್ಸಿನಿಂದ ಶ್ರಮಿಸುತ್ತಾರೆ. ನಿಸ್ವಾರ್ಥದಿಂದ ಆಡಿದರೆ ಗೆಲುವು ಸಾಧ್ಯ’ ಎಂದರು.</p>.<p>ನಗರಸಭೆ ಮಾಜಿ ಉಪಾಧ್ಯಕ್ಷ ಮಹೇಶ ಪಾಟೀಲ, ಮಾಜಿ ಸದಸ್ಯ ಮಾನಪ್ಪ ಚಳ್ಳಿಗಿಡ, ಪತ್ರಕರ್ತ ನಾಗರಾಜ ನ್ಯಾಮತಿ ಮಾತನಾಡಿದರು.</p>.<p>ಪರಶುರಾಮ ಚಳ್ಳಿಗಿಡ, ಭೀಮಣ್ಣ ನಾಯ್ಕೊಡಿ, ಮರೆಯಪ್ಪ ಕವಡಿಮಟ್ಟಿ, ಉಮಾಕಾಂತ ವಾರಿ, ಪವನಕುಮಾರ ನಾಯಕ, ಮಹೇಂದ್ರ ನಾಯಕ, ಸಂತೋಷ ನಾಯಕ, ಮಾರುತಿ, ಲಕ್ಷ್ಮಣ, ಉಮೇಶ, ಜಟ್ಟೆಪ್ಪ ಮತ್ತು ಕ್ರೀಡಾಪಟುಗಳು ಇದ್ದರು.</p>.<p>ಅಂಬರೀಶ್ ನಾಯ್ಕೊಡಿ ನಿರೂಪಿಸಿ ವಂದಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260602-30-281615445</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸುರಪುರ: ‘ವಯಸ್ಸಿನ ಅಂತರವಿಲ್ಲದೆ ಆಟವಾಡುವ ಕ್ರೀಡೆಯೆಂದರೆ ಕ್ರಿಕೆಟ್. ಜಾತಿ, ಧರ್ಮ, ಭಾಷೆ, ಪ್ರದೇಶ, ಬಡವ-ಶ್ರೀಮಂತ ಎಂಬ ಭೇದ ಮರೆತು ಎಲ್ಲರೂ ಸಹೋದರತೆಯಿಂದ ಆಡಬೇಕು’ ಎಂದು ಬಿ.ಬಿ. ಶಿವಣ್ಣ ಕಟ್ಟಿಮನಿ ಹೇಳಿದರು.</p>.<p>ನಗರದ ಬೆಟ್ಟದ ರತ್ನಮ್ಮ ದೇವಿಯ ಆವರಣದಲ್ಲಿ ನಡೆಯುತ್ತಿರುವ ಭೋವಿಗಲ್ಲಿ ಪ್ರೀಮಿಯರ್ ಲೀಗ್ ಸೀಸನ್–5ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>‘ಕ್ರೀಡೆ ಸಹೋದರತೆಯ ಗುಣವನ್ನು ಬೆಳೆಸುತ್ತದೆ. ಒಂದು ತಂಡದ ಎಲ್ಲ ಆಟಗಾರರು ಒಂದೇ ಸಮವಸ್ತ್ರ ಧರಿಸಿ ಆಡುವುದರಿಂದ ಮೇಲು–ಕೀಳಿಲ್ಲ ಎಂಬ ಭಾವನೆಯನ್ನು ಮೂಡಿಸುತ್ತದೆ. ಗೆಲ್ಲಲು 11 ಆಟಗಾರರು ಒಟ್ಟಾಗಿ ಒಂದೇ ಮನಸ್ಸಿನಿಂದ ಶ್ರಮಿಸುತ್ತಾರೆ. ನಿಸ್ವಾರ್ಥದಿಂದ ಆಡಿದರೆ ಗೆಲುವು ಸಾಧ್ಯ’ ಎಂದರು.</p>.<p>ನಗರಸಭೆ ಮಾಜಿ ಉಪಾಧ್ಯಕ್ಷ ಮಹೇಶ ಪಾಟೀಲ, ಮಾಜಿ ಸದಸ್ಯ ಮಾನಪ್ಪ ಚಳ್ಳಿಗಿಡ, ಪತ್ರಕರ್ತ ನಾಗರಾಜ ನ್ಯಾಮತಿ ಮಾತನಾಡಿದರು.</p>.<p>ಪರಶುರಾಮ ಚಳ್ಳಿಗಿಡ, ಭೀಮಣ್ಣ ನಾಯ್ಕೊಡಿ, ಮರೆಯಪ್ಪ ಕವಡಿಮಟ್ಟಿ, ಉಮಾಕಾಂತ ವಾರಿ, ಪವನಕುಮಾರ ನಾಯಕ, ಮಹೇಂದ್ರ ನಾಯಕ, ಸಂತೋಷ ನಾಯಕ, ಮಾರುತಿ, ಲಕ್ಷ್ಮಣ, ಉಮೇಶ, ಜಟ್ಟೆಪ್ಪ ಮತ್ತು ಕ್ರೀಡಾಪಟುಗಳು ಇದ್ದರು.</p>.<p>ಅಂಬರೀಶ್ ನಾಯ್ಕೊಡಿ ನಿರೂಪಿಸಿ ವಂದಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260602-30-281615445</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>