<p>ತೀರ್ಥಹಳ್ಳಿ: ಮೇಲಿನಕುರುವಳ್ಳಿಯ 53ನೇ ವರ್ಷದ ಕರಗ ಮಹೋತ್ಸವದ ಅಂಗವಾಗಿ ಪಾರಂಪರಿಕ ಕ್ರೀಡಾ ಸಮಿತಿ, ಮಾಲ್ಗುಡಿ ಗೆಳೆಯರ ಬಳಗ ಬುಧವಾರ ಆಯೋಜಿಸಿದ್ದ ರಾಜ್ಯಮಟ್ಟದ ಟಗರು ಕಾಳಗ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿತು.</p>.<p>ಮಧ್ಯಾಹ್ನ ಆರಂಭಗೊಂಡ ಕಾಳಗ ಮಧ್ಯರಾತ್ರಿಯವರೆಗೆ ನಡೆಯಿತು. ಸಾವಿರಾರು ಜನ ಕಾಳಗ ವೀಕ್ಷಿಸಿದರು. ನೆಲಮಂಗಲ, ಹಾವೇರಿ, ದಾವಣಗೆರೆ, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಅಂದಾಜು 80ಕ್ಕೂ ಹೆಚ್ಚು ಟಗರುಗಳು ಭಾಗವಹಿಸಿದ್ದವು.</p>.<p>ಎರಡು ಹಲ್ಲು ವಿಭಾಗದಲ್ಲಿ ಶಿವಮೊಗ್ಗದ ಅಧೀರ ಪ್ರಥಮ (₹ 8,000), ಭದ್ರಾವತಿಯ ಏಳಿಗೆರೆ ಕಾಳಿ ದ್ವಿತೀಯ (₹ 4,000), ನಾಲ್ಕು ಹಲ್ಲು ವಿಭಾಗದಲ್ಲಿ ಭದ್ರಾವತಿಯ ಸುಲ್ತಾನ್ ಮಿರ್ಜಾ ಪ್ರಥಮ (₹ 10,000), ಶಿವಮೊಗ್ಗದ ವಾಲ್ಮೀಕಿ ದ್ವಿತೀಯ (₹ 5,000), ಆರು ಹಲ್ಲು ವಿಭಾಗದಲ್ಲಿ ಶಿವಮೊಗ್ಗದ ಸೂರ್ಯಪುತ್ರ ಪ್ರಥಮ (₹ 15,000), ಛತ್ರಪತಿ ರಣಧೀರ ದ್ವಿತೀಯ (₹ 7,000), ಎಂಟು ಹಲ್ಲು ವಿಭಾಗದಲ್ಲಿ ಮಂಚ ಬಾಯ್ಸ್ ಅರಿಗೆ ಪ್ರಥಮ (₹ 25,000), ಶಿವಮೊಗ್ಗದ ಜುಲ್ಫಿಕರ್ ದ್ವಿತೀಯ (₹ 15,000) ಬಹುಮಾನ ಪಡೆದುಕೊಂಡಿತು.</p>.<p>ಕ್ರೀಡಾ ಸಮಿತಿಯ ಅಧ್ಯಕ್ಷ ಎಸ್.ದೇವರಾಜ್, ಸದಸ್ಯರಾದ ಗಿರೀಶ್, ಸುಬ್ರಮಣ್ಯ, ಸಿದ್ಧಾರ್ಥ್, ಭರತ್ ಆರ್, ಹರೀಶ್ ಡಿ, ಸಂತೋಷ್ ಪಿ. ಇದ್ದರು.</p>.<p>ಹೊಸಮನೆ ಶಬರೀಶ್, ಮಣಿಕಂಠ, ಮಂಜುನಾಥ್ ನಿರೂಪಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260508-42-1016526191</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತೀರ್ಥಹಳ್ಳಿ: ಮೇಲಿನಕುರುವಳ್ಳಿಯ 53ನೇ ವರ್ಷದ ಕರಗ ಮಹೋತ್ಸವದ ಅಂಗವಾಗಿ ಪಾರಂಪರಿಕ ಕ್ರೀಡಾ ಸಮಿತಿ, ಮಾಲ್ಗುಡಿ ಗೆಳೆಯರ ಬಳಗ ಬುಧವಾರ ಆಯೋಜಿಸಿದ್ದ ರಾಜ್ಯಮಟ್ಟದ ಟಗರು ಕಾಳಗ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿತು.</p>.<p>ಮಧ್ಯಾಹ್ನ ಆರಂಭಗೊಂಡ ಕಾಳಗ ಮಧ್ಯರಾತ್ರಿಯವರೆಗೆ ನಡೆಯಿತು. ಸಾವಿರಾರು ಜನ ಕಾಳಗ ವೀಕ್ಷಿಸಿದರು. ನೆಲಮಂಗಲ, ಹಾವೇರಿ, ದಾವಣಗೆರೆ, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಅಂದಾಜು 80ಕ್ಕೂ ಹೆಚ್ಚು ಟಗರುಗಳು ಭಾಗವಹಿಸಿದ್ದವು.</p>.<p>ಎರಡು ಹಲ್ಲು ವಿಭಾಗದಲ್ಲಿ ಶಿವಮೊಗ್ಗದ ಅಧೀರ ಪ್ರಥಮ (₹ 8,000), ಭದ್ರಾವತಿಯ ಏಳಿಗೆರೆ ಕಾಳಿ ದ್ವಿತೀಯ (₹ 4,000), ನಾಲ್ಕು ಹಲ್ಲು ವಿಭಾಗದಲ್ಲಿ ಭದ್ರಾವತಿಯ ಸುಲ್ತಾನ್ ಮಿರ್ಜಾ ಪ್ರಥಮ (₹ 10,000), ಶಿವಮೊಗ್ಗದ ವಾಲ್ಮೀಕಿ ದ್ವಿತೀಯ (₹ 5,000), ಆರು ಹಲ್ಲು ವಿಭಾಗದಲ್ಲಿ ಶಿವಮೊಗ್ಗದ ಸೂರ್ಯಪುತ್ರ ಪ್ರಥಮ (₹ 15,000), ಛತ್ರಪತಿ ರಣಧೀರ ದ್ವಿತೀಯ (₹ 7,000), ಎಂಟು ಹಲ್ಲು ವಿಭಾಗದಲ್ಲಿ ಮಂಚ ಬಾಯ್ಸ್ ಅರಿಗೆ ಪ್ರಥಮ (₹ 25,000), ಶಿವಮೊಗ್ಗದ ಜುಲ್ಫಿಕರ್ ದ್ವಿತೀಯ (₹ 15,000) ಬಹುಮಾನ ಪಡೆದುಕೊಂಡಿತು.</p>.<p>ಕ್ರೀಡಾ ಸಮಿತಿಯ ಅಧ್ಯಕ್ಷ ಎಸ್.ದೇವರಾಜ್, ಸದಸ್ಯರಾದ ಗಿರೀಶ್, ಸುಬ್ರಮಣ್ಯ, ಸಿದ್ಧಾರ್ಥ್, ಭರತ್ ಆರ್, ಹರೀಶ್ ಡಿ, ಸಂತೋಷ್ ಪಿ. ಇದ್ದರು.</p>.<p>ಹೊಸಮನೆ ಶಬರೀಶ್, ಮಣಿಕಂಠ, ಮಂಜುನಾಥ್ ನಿರೂಪಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260508-42-1016526191</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>