ಬೆಂಗಳೂರು: ಆಕಾಶ್ ಕೆ.ಜೆ ಮತ್ತು ಕರುಣಾ, ಇಲ್ಲಿ ನಡೆದ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಸಬ್ ಜೂನಿಯರ್ ಬಾಲಕ ಮತ್ತು ಬಾಲಕಿಯರ ವಿಭಾಗದ ಪ್ರಶಸ್ತಿ ಗೆದ್ದರು.
ಮಲ್ಲೇಶ್ವರಂ ಅಸೋಸಿಯೇಷನ್ ಆಯೋಜಿಸಿದ್ದ ಟೂರ್ನಿಯ ಫೈನಲ್ನಲ್ಲಿ ಆಕಾಶ್ 12–10, 9–11, 11–8, 11–5ರಲ್ಲಿ ಸುಜನ್ ಭಾರದ್ವಾಜ್ ಎದುರು ಗೆದ್ದರು. ಕರುಣಾ, ರೈನಾ ನರ ಅವರನ್ನು 11–5, 11–5, 11–10ರಲ್ಲಿ ಸೋಲಿಸಿದರು.