ಅಡಿಲೇಡ್: ಆಕಾಶ್ದೀಪ್ ಸಿಂಗ್ ಗಳಿಸಿದ ಹ್ಯಾಟ್ರಿಕ್ ಗೋಲುಗಳು ವ್ಯರ್ಥವಾದವು. ಭಾರತ ಹಾಕಿ ತಂಡವು ಇಲ್ಲಿ ನಡೆದ ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ 4–5ರಿಂದ ಸೋಲನುಭವಿಸಿತು.
ಶನಿವಾರ ನಡೆದ ಐದು ಪಂದ್ಯಗಳ ಸರಣಿಯ ಮೊದಲ ಹಣಾಹಣಿಯಲ್ಲಿ ಆಕಾಶ್ದೀಪ್ 10, 27 ಮತ್ತು 59ನೇ ನಿಮಿಷಗಳಲ್ಲಿ ಕೈಚಳಕ ತೋರಿದರು. 31ನೇ ನಿಮಿಷದಲ್ಲಿ ಹರ್ಮನ್ಪ್ರೀತ್ ಸಿಂಗ್ ಅವರು ಪೆನಾಲ್ಟಿ ಕಾರ್ನರ್ಅನ್ನು ಗೋಲಿನಲ್ಲಿ ಪರಿವರ್ತಿಸಿದರು.
ಆಸ್ಟ್ರೇಲಿಯಾ ತಂಡಕ್ಕಾಗಿ ಲಚ್ಲಾನ್ ಶಾರ್ಪ್ (5ನೇ ನಿ.), ನೇಥನ್ ಎಪ್ರಮ್ಸ್ (21ನೇ ನಿ.), ಟಾಮ್ ಕ್ರೇಗ್ (41ನೇ ನಿ.) ಮತ್ತು ಬ್ಲೇಕ್ ಗೋವರ್ಸ್ (57 ಮತ್ತು 60ನೇ ನಿ.) ಗೋಲು ದಾಖಲಿಸಿದರು.
ಆರಂಭದಲ್ಲಿ 4–3ರಿಂದ ಮುನ್ನಡೆ ಕಾಯ್ದುಕೊಂಡಿದ್ದ ಹರ್ಮನ್ಪ್ರೀತ್ ಸಿಂಗ್ ನಾಯಕತ್ವದ ತಂಡ ಕೊನೆಯ ಕ್ಷಣಗಳಲ್ಲಿ ಪಂದ್ಯವನ್ನು ಕೈಚೆಲ್ಲಿತು.
ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಗೋಲಾಗಿಸುವಲ್ಲಿ ಎಡವಿದ್ದು ಭಾರತ ತಂಡದ ಸೋಲಿಗೆ ಕಾರಣವಾಯಿತು.