‘ವಾರಂಗಲ್ನಲ್ಲಿ ಕರ್ನಾಟಕ ತಂಡಕ್ಕೆ ಒಂದು ಚಿನ್ನದ ಪದಕವಷ್ಟೇ ಲಭಿಸಿದೆ. ಆ ಪದಕವನ್ನು ನಾನೇ ಗೆದ್ದು ತಂದಿದ್ದೇನೆ ಎನ್ನುವುದು ಹೆಮ್ಮೆಯ ಭಾವ ಮೂಡಿಸಿದೆ. ಧಾರವಾಡದ ಆರ್.ಎನ್. ಶೆಟ್ಟಿ ಸಿಂಥೆಟಿಕ್ ಟ್ರ್ಯಾಕ್ನಲ್ಲಿ ಗಣೇಶ ನಾಯ್ಕ ಅವರಲ್ಲಿ ಕಠಿಣ ತರಬೇತಿ ಪಡೆಯುತ್ತಿದ್ದೇನೆ’ ಎಂದು ಅಕ್ಷತಾ ತಿಳಿಸಿದರು. ಅಕ್ಷತಾ, ನಗರದ ಅಂಗು ಪೂಜಾರಿ ಹಾಗೂ ಜಯಂತಿ ದಂಪತಿಯ ಪುತ್ರಿ.