ಬೆಂಗಳೂರು: ಸೊಗಸಾದ ಆಟವಾಡಿದ ಮಂಡ್ಯ ಬುಲ್ಸ್ ತಂಡದವರು ಚೊಚ್ಚಲ ಗ್ರ್ಯಾನ್ ಪ್ರಿ ಬ್ಯಾಡ್ಮಿಂಟನ್ ಲೀಗ್ನಲ್ಲಿ ಶುಭಾರಂಭ ಮಾಡಿದರು.
ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ಕೋರ್ಟ್ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಬುಲ್ಸ್ ತಂಡ ಬಂಡೀಪುರ ಟಸ್ಕರ್ಸ್ ತಂಡವನ್ನು ಮಣಿಸಿತು.
ಮೊದಲು ನಡೆದ ಮಹಿಳೆಯರ ಸಿಂಗಲ್ಸ್ನಲ್ಲಿ ಬುಲ್ಸ್ ತಂಡದ ಅನನ್ಯಾ ಪ್ರವೀಣ್ ಅವರು 14–15, 8–15 ರಲ್ಲಿ ಟಸ್ಕರ್ಸ್ ತಂಡದ ಅಲ್ಫಿಯಾ ರಿಯಾಸ್ ಎದುರು ಸೋತರು.
ಆದರೆ ಪುರುಷರ ಡಬಲ್ಸ್ ವಿಭಾಗದಲ್ಲಿ ಆಶಿತ್ ಸೂರ್ಯ–ಸಾಯಿ ಪ್ರತೀಕ್ ಅವರು 15–11, 15–12 ರಲ್ಲಿ ಕಿಶಲ್ ಗಣಪತಿ– ವಿ.ವೈಭವ್ ಅವರನ್ನು ಮಣಿಸಿ ಬುಲ್ಸ್ ತಂಡಕ್ಕೆ ಸಮಬಲ ತಂದಿತ್ತರು.
ಬಳಿಕ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಅನಿರುದ್ಧ್ ದೇಶಪಾಂಡೆ ಅವರು 15–9, 15–6 ರಲ್ಲಿ ಅಂತರರಾಷ್ಟ್ರೀಯ ಆಟಗಾರ ಡೇನಿಯಲ್ ಫರೀದ್ ವಿರುದ್ಧ ಅಚ್ಚರಿಯ ಗೆಲುವು ಸಾಧಿಸಿ ತಮ್ಮ ತಂಡಕ್ಕೆ 2–1 ರಲ್ಲಿ ಮೇಲುಗೈ ನೀಡಿದರು.
ಮಿಶ್ರ ಡಬಲ್ಸ್ನಲ್ಲಿ ಬುಲ್ಸ್ ತಂಡದ ಮಧುಸೂದನ್– ರುತ್ ಮಿಶಾ ವಿನೋದ್ 10-15, 15-14, 15-12 ರಲ್ಲಿ ಅಭಿಷೇಕ್ ಯೆಲಿಗಾರ್ ಹಾಗೂ ಅಪೇಕ್ಷಾ ನಾಯಕ್ ಅವರನ್ನು ಸೋಲಿಸಿದರು.
ಕೊನೆಯ ಪಂದ್ಯದಲ್ಲಿ ಆಶಿತ್ ಸೂರ್ಯ/ ಸಾಯಿ ಪ್ರತೀಕ್ ಮತ್ತು ಮಧುಸೂದನ್ ಅವರು 21–16 ರಲ್ಲಿ ಅಭಿಷೇಕ್ ಯೆಲಿಗಾರ್/ ವಿ. ವೈಭವ್/ ಗಣೇಶ್ ವಿಠಲ್ಜಿ ಅವರನ್ನು ಮಣಿಸಿದರು.
ಉದ್ಘಾಟನೆ: ಚೊಚ್ಚಲ ಜಿಪಿಬಿಎಲ್ ಟೂರ್ನಿಯಲ್ಲಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಉದ್ಘಾಟಿಸಿದರು. ಮೊದಲ ವರ್ಷದ ಟೂರ್ನಿಯಲ್ಲಿ ಎಂಟು ತಂಡಗಳು ಪಾಲ್ಗೊಂಡಿವೆ.