ಭಾರತದ ಅನುಭವಿ ಆಟಗಾರ ಶರತ್, ಅಗ್ರ ರ್ಯಾಂಕಿನ ಸತ್ಯನ್ ಅವರು ಜಪಾನ್, ಕೊರಿಯಾ, ತೈಪೆ ಹಾಗೂ ಸಿಂಗಪುರದಂತಹ ಪ್ರಮುಖ ತಂಡಗಳ ಆಟಗಾರರ ಎದುರು ಸಾಮರ್ಥ್ಯ ಪರೀಕ್ಷೆಗೆ ಸಜ್ಜಾಗಿದ್ದಾರೆ. ಮಹಿಳಾ ವಿಭಾಗದಲ್ಲಿ ಮಣಿಕಾ ನಿರೀಕ್ಷೆ ಮೂಡಿಸಿದ್ದಾರೆ. ಭಾರತ ಟೇಬಲ್ ಟೆನಿಸ್ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಂ.ಪಿ.ಸಿಂಗ್ ಹಾಗೂ ಖಜಾಂಚಿ ಅರುಣ್ ಕುಮಾರ್ ಬ್ಯಾನರ್ಜಿ ಕೂಡ ಇಂಡೊನೇಷ್ಯಾಕ್ಕೆ ತೆರಳಿದ್ದಾರೆ. ಇವರಿಬ್ಬರು ಏಷ್ಯನ್ ಟೇಬಲ್ ಟೆನಿಸ್ ಯೂನಿಯನ್ (ಎಟಿಟಿಯು) ಅಧಿವೇಶನದಲ್ಲಿ ಪಾಲ್ಗೊಳ್ಳುವರು.