ಕವಿ ರಾಜೇಶ್ವರಿ ಸಾರಂಗಮಠ ಅವರು, ‘ಬನ್ನಿರೋ ಬನ್ನಿರೋ ಮತದಾನ ಮಾಡಲು ಬನ್ನಿರೋ’, ರಾಹಿಲ್ ರಾಜಾಭಕ್ಷು, ‘ನಿಮ್ಮೊಂದು ಮತ ದೇಶಕ್ಕೆ ಅಮೂಲ್ಯ’, ಕವಿ ಗಂಗಾಧರ ನಂದಿ, ‘ಒಳಿತು ಮಾಡಲು ಏಳು, ಮತ ಹಾಕಲು ಹೇಳು’, ವಿದ್ಯಾರ್ಥಿ ರವೀಂದ್ರ ಕೊಳ್ಳಿ, ‘ ವರ್ಷದ ಮಳೆಗೆ ಕೆರೆ ಕಟ್ಟೆ ತುಂಬುತ್ತವೆ, ಐದು ವರ್ಷದ ಚುನಾವಣೆಯಲ್ಲಿ ಮತಡಬ್ಬಿಗಳು ತುಂಬಲಿ’ ಎಂಬ ಕವನಗಳು ಜನಮೆಚ್ಚುಗೆ ಪಡೆದವು. ಜಿ.ಎಂ.ಓಂಕಾರಣ್ಣನವರ ಸೇರಿದಂತೆ ಹಲವರು ಮತಜಾಗೃತಿ ಕವನ ವಾಚಿಸಿದರು.