ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೂ ಮಾರಿ ದೇಣಿಗೆ ನೀಡಿದ ಅರ್ಜುನ್‌

ಮತ್ತೊಮ್ಮೆ ಕಳಕಳಿ ಮೆರೆದಿ ಯುವ ಗಾಲ್ಫರ್‌
Last Updated 21 ಏಪ್ರಿಲ್ 2020, 20:20 IST
ಅಕ್ಷರ ಗಾತ್ರ

ನವದೆಹಲಿ: ಇತ್ತೀಚೆಗಷ್ಟೇ ತಾನು ಗೆದ್ದ ಟ್ರೋಫಿಗಳನ್ನೆಲ್ಲಾ ಮಾರಿ ಪಿಎಂ ಕೇರ್ಸ್‌ ನಿಧಿಗೆ ದೇಣಿಗೆ ನೀಡಿದ್ದ ಹದಿಹರೆಯದ ಗಾಲ್ಫರ್‌ ಅರ್ಜುನ್‌ ಭಾಟಿ ಮತ್ತೆ ಸುದ್ದಿಯಾಗಿದ್ದಾರೆ. ಈ ಬಾರಿ 15ರ ಹರೆಯದ ಅರ್ಜುನ್‌ ಕಿತ್ತುಹೋದ ತನ್ನ ಶೂಗಳನ್ನು ಮಾರಿ ₹ 3.3 ಲಕ್ಷ ಸಂಗ್ರಹಿಸಿಕೊಟ್ಟಿದ್ದಾರೆ.

ಗ್ರೇಟರ್‌ ನೊಯ್ಡಾದ ಪ್ರತಿಭಾನ್ವಿತ ಗಾಲ್ಫ್‌ ಆಟಗಾರ, 2018ರ ಜೂನಿಯರ್‌ ವಿಶ್ವ ಕಪ್‌ ಯಶಸ್ಸಿನ ವೇಳೆ ಈ ಬೂಟು ಧರಿಸಿದ್ದರು. ‘ಈ ಶೂಗಳನ್ನು ತನ್ನ ಚಿಕ್ಕಪ್ಪ ವನಿಶ್ ಪ್ರಧಾನ್‌ಜಿ ಅವರು ₹ 3,30,000 ಕೊಟ್ಟು ಖರೀದಿ ಮಾಡಿದ್ದಾರೆ. ಈ ಮೊತ್ತವನ್ನೂ ಪಿಎಂ ಕೇರ್ಸ್‌ ನಿಧಿಗೆ ನೀಡಿದ್ದೇನೆ’ ಎಂದು ಅರ್ಜುನ್‌ ಮಂಗಳವಾರ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಮಾರ್ಚ್‌ ಕೊನೆಯಲ್ಲಿ ಅರ್ಜುನ್‌ ಇದುವರೆಗೆ ಗೆದ್ದುಕೊಂಡಿದ್ದ 102 ಟ್ರೋಫಿಗಳನ್ನು ಮಾರಿ ₹ 4.30 ಲಕ್ಷ ಗಳಿಸಿದ್ದರು.

‘ನಾವು ಬದುಕುತ್ತೇವೊ, ಇಲ್ಲವೊ, ಆದರೆ ದೇಶ ಉಳಿಯಬೇಕು. ಎಲ್ಲರನ್ನೂ ಕೊರೊನಾದಿಂದ ರಕ್ಷಿಸಬೇಕು‘ ಎಂಬ ಸಂದೇಶವನ್ನು ಟ್ವೀಟ್‌ ಮಾಡಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT