ಬಿ.ಅಧಿಪನ್ ಅವರು ತಮ್ಮ ಎರಡೂ ಪಂದ್ಯಗಳಲ್ಲಿ ರೈನತ್ ಜುಮಬಯೆವ್ ಎದುರು ಭರ್ಜರಿ ಜಯ ಸಾಧಿಸಿದರು. ಮೊದಲ ಹಣಾಹಣಿಯಲ್ಲಿ ಅಧಿಪನ್ ಜಯ ಸಾಧಿಸಿದರೆ ನಿಹಾಲ್ ಸರೀನ್, ಎಸ್.ಪಿ. ಸೇತುರಾಮನ್ ಮತ್ತು ಕೆ.ಶಶಿಕಿರಣ್ ಡ್ರಾ ಸಾಧಿಸಿದರು. ಎರಡನೇ ಹಣಾಹಣಿಯಲ್ಲಿ ಅಧಿಪನ್ ಜೊತೆಯಲ್ಲಿ ಸರೀನ್ ಮತ್ತು ಸೇತುರಾಮನ್ ಕೂಡ ಗೆಲುವು ದಾಖಲಿಸಿದರು. ಆದರೆ ಶಶಿಕಿರಣ್, ಡೆನಿಸ್ ಮಖನೆವ್ಗೆ ಮಣಿದರು. ನಾಯಕ ಶೇಖರ್ ಗಂಗೂಲಿ ಶನಿವಾರ ಒಂದು ಪಂದ್ಯವನ್ನೂ ಆಡಲಿಲ್ಲ. ಭಾನುವಾರ ನಡೆಯಲಿರುವ ಫೈನಲ್ನಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು ಎದುರಿಸಲಿದೆ.