ಈ ಕಾಮಗಾರಿ ಮುಗಿದ ನಂತರ ಹಿರಿಯ ಅಧಿಕಾರಿಗಳು ಅದು ಕಳಪೆಯಾದ ಬಗ್ಗೆ ಪರಿಶೀಲನೆ ಮಾಡದೆ ಹಣವನ್ನು ಪಾವತಿಸುತ್ತಾರೆ. ಗ್ರಾಮದ ಮುಖಂಡರು ಈ ಬಗ್ಗೆ ತಕರಾರು ಸಲ್ಲಿಸಿದರೂ ಯಾರೂ ಗಮನ ಹರಿಸುತ್ತಿಲ್ಲ. ಇದನ್ನು ಅಧಿಕಾರಿಗಳು ಪರಿಶೀಲಿಸಿ ಕಾಮಾಗಾರಿ ನಡೆಸುವವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಜಿ.ಕಟ್ಟಿಮನಿ, ಶರಣಪ್ಪ ಹಲಗಿ, ದುರಗಪ್ಪ ಹಿರೇಮನಿ, ಶರಣಪ್ಪ ಹಿರೇಕೊಪ್ಪ, ಹನಮಪ್ಪ ಹಿರೇಕೊಪ್ಪ, ಮೈಲಾರಪ್ಪ ಹೊಸರಾಂಪುರ, ಪರಸಪ್ಪ ಹಿರೇಮನಿ ಮತ್ತು ಹೊಸರಾಂಪುರ ಗ್ರಾಮಸ್ಥರು ಒತ್ತಾಯಿಸಿದ್ದಾರೆ.