ನವದೆಹಲಿ: ‘ಒಲಿಂಪಿಕ್ಸ್ನಲ್ಲಿ ನಿರೀಕ್ಷೆಗೆ ತಕ್ಕ ಸಾಮರ್ಥ್ಯ ತೋರದ ಅಥ್ಲೀಟ್ಗಳು ಕಠಿಣ ಶಿಕ್ಷೆ ಎದುರಿಸಬೇಕಾಗುತ್ತದೆ’ ಎಂದು ಭಾರತ ಅಥ್ಲೆಟಿಕ್ಸ್ ಫೆಡರೇಷನ್ ಶುಕ್ರವಾರ ಎಚ್ಚರಿಸಿದೆ.
ಈಗಾಗಲೇ ಕೂಟಕ್ಕೆ ಅರ್ಹತೆ ಗಳಿಸಿರುವ ಲಾಂಗ್ಜಂಪ್ ಸ್ಪರ್ಧಿ ಎಂ.ಶ್ರೀಶಂಕರ್ ಹಾಗೂ 20 ಕಿ.ಮೀ.ನಡಿಗೆ ಸ್ಪರ್ಧಿ ಕೆ.ಟಿ.ಇರ್ಫಾನ್ ಉತ್ತಮ ಲಯದಲ್ಲಿಲ್ಲ ಎಂಬ ಮಾತುಗಳು ಕೇಳಿಬಂದಿದೆ.
‘ಇರ್ಫಾನ್ ಹಾಗೂ ಶ್ರೀಶಂಕರ್ ಒಲಿಂಪಿಕ್ಸ್ನಲ್ಲಿ ಉತ್ತಮ ಸಾಮರ್ಥ್ಯ ತೋರಲಿದ್ದಾರೆ ಎಂದು ಅವರ ಕೋಚ್ಗಳು ಭರವಸೆ ನೀಡಿದ್ದಾರೆ. ಹೀಗಾಗಿ ಕೂಟಕ್ಕೆ ಕಳುಹಿಸಲು ತೀರ್ಮಾನಿಸಿದ್ದೇವೆ. ನಿರಾಸೆ ಮೂಡಿಸಿದರೆ ಕಠಿಣ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಎಎಫ್ಐ ಅಧ್ಯಕ್ಷ ಆದಿಲ್ ಸುಮರಿವಾಲ ಹೇಳಿದ್ದಾರೆ.