ಮಲ್ಲೇಶ್ವರದ ಕೆನರಾ ಯೂನಿಯನ್ ಸಭಾಂಗಣದಲ್ಲಿ ನಡೆಯುತ್ತಿರುವ ಈ ಟೂರ್ನಿಯ ಇನ್ನೊಂದು ಪ್ರಿಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಐದನೇ ಶ್ರೇಯಾಂಕದ ಕಿಶಲ್ ಗಣಪತಿ ಕೂಡ ಸೋಲು ಕಂಡರು. ಸಾತ್ವಿಕ್ ಶಂಕರ್ 21–18, 13–21, 21–14ರಲ್ಲಿ ಕಿಶಲ್ ವಿರುದ್ಧ ಜಯಗಳಿಸಿದರು. ಅಗ್ರ ಶ್ರೇಯಾಂಕದ ಬಿ.ಎಸ್.ವೈಭವ್ ಶ್ರೀನಾಥ್, ಎರಡನೇ ಶ್ರೇಯಾಂಕದ ನರೇನ್ ಅಯ್ಯರ್ ಸೇರಿದಂತೆ ಇತರ ಶ್ರೇಯಾಂಕದ ಆಟಗಾರರು ಎಂಟರ ಘಟ್ಟಕ್ಕೆ ಮುನ್ನಡೆದರು.