ಬೆಂಗಳೂರು: ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ ಅವರಿಗಿಂತಲೂ ತಾವು ಪ್ರಮುಖರು ಎಂದು ಬಿಂಬಿಸಿಕೊಳ್ಳಲು ಸಂಸದ ಪ್ರತಾಪ್ ಸಿಂಹ ಮತ್ತು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಒದ್ದಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಲು ಮತ್ತು ತಮ್ಮನ್ನು ರಾಜಕೀಯವಾಗಿ ಪ್ರಮುಖ ವ್ಯಕ್ತಿ ಎಂದು ಬಿಂಬಿಸಿಕೊಳ್ಳಲು ಸಣ್ಣ ಅಪಘಾತವೊಂದನ್ನು ಅನಂತಕುಮಾರ ಹೆಗಡೆ ಬಳಸಿಕೊಳ್ಳುತ್ತಿದ್ದಾರೆ ಎಂದು ಟ್ವೀಟ್ನಲ್ಲಿ ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.
There is a leadership crisis in Karnataka BJP. People like Anant Kumar Hegde & Pratap Simha are struggling to overshadow their CM candidate B S Yeddyurappa. That is why Hegde is using a minor accident to become politically relevant & sideline Yeddyurappa. https://t.co/Qq6b0RQjSl