‘ಈ ಹಿಂದೆ ರಾಜ್ಯದ ಸ್ಪರ್ಧಿಗಳು ಬಸ್ ಅಥವಾ ರೈಲಿನ ಮೂಲಕ ರಾಷ್ಟ್ರೀಯ ಚಾಂಪಿಯನ್ಷಿಪ್ ನಡೆಯುವ ಸ್ಥಳಗಳಿಗೆ ಹೋಗುತ್ತಿದ್ದರು. ಎರಡು ಇಲ್ಲವೇ ಮೂರು ದಿನ ನಿರಂತರವಾಗಿ ಪ್ರಯಾಣ ಮಾಡಬೇಕಾಗಿದ್ದರಿಂದ ಸಾಕಷ್ಟು ದಣಿಯುತ್ತಿದ್ದರು. ವಿಶ್ರಾಂತಿ ಇಲ್ಲದೆಯೇ ಪಂದ್ಯಗಳನ್ನು ಆಡುವ ಅನಿವಾರ್ಯತೆಯೂ ಎದುರಾಗಿತ್ತು. ಹೀಗಾಗಿ ಮುಂದಿನ ವರ್ಷದಿಂದ ದೂರದ ರಾಜ್ಯಗಳಿಗೆ ಹೋಗುವ ಎಲ್ಲರಿಗೂ ವಿಮಾನ ಯಾನ ಸೌಕರ್ಯ ಕಲ್ಪಿಸಲು ತೀರ್ಮಾನಿಸಿದ್ದೇವೆ’ ಎಂದು ಅವರು ಹೇಳಿದರು.