ಶಂಕೀರ್, ಅಜರ್ಬೈಜಾನ್: ಭಾರತದ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್, ಶಂಕೀರ್ ಚೆಸ್ ಟೂರ್ನಿಯ ಆರನೇ ಸುತ್ತಿನಲ್ಲಿ ಡ್ರಾ ಮಾಡಿಕೊಂಡಿದ್ದಾರೆ.
ಸೋಮವಾರ ನಡೆದ ಹೋರಾಟದಲ್ಲಿ ಭಾರತದ ಆಟಗಾರ, ರಷ್ಯಾದ ಅಲೆಕ್ಸಾಂಡರ್ ಗ್ರೀಸ್ಚುಕ್ ವಿರುದ್ಧ ಪಾಯಿಂಟ್ ಹಂಚಿಕೊಂಡರು. ಈ ಮೂಲಕ ಒಟ್ಟು ಪಾಯಿಂಟ್ಸ್ ಅನ್ನು 3.5ಕ್ಕೆ ಹೆಚ್ಚಿಸಿಕೊಂಡರು.
ನಾರ್ವೆಯ ಮ್ಯಾಗ್ನಸ್ ಕಾರ್ಲ್ಸನ್ ಗೆಲುವಿನ ಸಿಹಿ ಸವಿದರು. ಅವರು ನೆದರ್ಲೆಂಡ್ಸ್ನ ಅನಿಶ್ ಗಿರಿ ಅವರನ್ನು ಮಣಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಂಡರು. ಕಾರ್ಲ್ಸನ್ ಖಾತೆಯಲ್ಲಿ ಒಟ್ಟು ಐದು ಪಾಯಿಂಟ್ಸ್ ಇವೆ.