ಮಂಗಳೂರಿನ ಗಹನ್ ಆರನೇ ಸುತ್ತಿನಲ್ಲಿ, ಎರಡನೇ ಶ್ರೇಯಾಂಕದ ಧರ್ಮಸ್ಥಳದ ಆಟಗಾರ ಶಾಬ್ದಿಕ್ ವರ್ಮಾ (4.5 ಅಂಕ) ಅವರನ್ನು ಮಣಿಸಿದರೆ, ರಜತ್ ಐತಾಳ್, ರಾಯಚೂರಿನ ಶ್ರೀನಿಧಿ ಕುಲಕರ್ಣಿ (4.5) ವಿರುದ್ಧ, ನಿತೀಶ್, ಶಿವಮೊಗ್ಗದ ಅಜಯ್ ಎಸ್.ಎಂ. (4.5) ವಿರುದ್ಧ ಜಯಗಳಿಸಿದರು. ಮೊದಲ ಈ ಮೂರು ಬೋರ್ಡ್ಗಳಲ್ಲಿ ಬಿಳಿ ಕಾಯಿಗಳನ್ನು ಮುನ್ನಡೆಸಿದವರು ಜಯಗಳಿಸಿದರೆ, ನಂತರದ ಐದು ಬೋರ್ಡ್ಗಳಲ್ಲಿ ಕಪ್ಪು ಕಾಯಿಗಳಲ್ಲಿ ಆಡಿದ ಆಟಗಾರರು ಪೂರ್ಣ ಪಾಯಿಂಟ್ ಪಡೆದರು.