ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಕ್ಕೊ: ಕರ್ನಾಟಕ ತಂಡದ ಜಯಭೇರಿ

ಕ್ಯಾತನಹಳ್ಳಿಯಲ್ಲಿ ಕೆ.ಎಸ್. ಪುಟ್ಟಣ್ಣಯ್ಯ ಸ್ಮಾರಕ ಅಖಿಲ ಭಾರತ ಟೂರ್ನಿ
Last Updated 3 ಜೂನ್ 2022, 19:29 IST
ಅಕ್ಷರ ಗಾತ್ರ

ಪಾಂಡವಪುರ (ಮಂಡ್ಯ ಜಿಲ್ಲೆ): ಕರ್ನಾಟಕ ಕೊಕ್ಕೊ ತಂಡವು ಕ್ಯಾತನಹಳ್ಳಿಯವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದಿವಂಗತ ಕೆ.ಎಸ್‌.ಪುಟ್ಟಣ್ಣಯ್ಯ ಸ್ಮರಣಾರ್ಥ ಅಖಿಲ ಭಾರತ ಪುರುಷರ ಹೊನಲು–ಬೆಳಕಿನ ಕೊಕ್ಕೊ ಟೂರ್ನಿಯ ಪಂದ್ಯದಲ್ಲಿ ಜಯಭೇರಿ ಬಾರಿಸಿತು.

ಶುಕ್ರವಾರ ಸಂಜೆ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡವು ಕೇವಲ 1 ಅಂಕದ ಅಂತರದಿಂದ ಮುಂಬೈ ಪೊಲೀಸ್ ತಂಡದ ಎದುರು ಜಯಿಸಿತು ಹಾಗೂ ಮುಂಬೈ ಆರ್‌ಬಿಐ ತಂಡವನ್ನು 2 ಅಂಕಗಳಿಂದ ಸೋಲಿಸಿತು. ನವಮುಂಬೈ ನಗರಪಾಲಿಕೆ ತಂಡವು ಮುಂಬೈ ಪೊಲೀಸ್ ತಂಡವನ್ನು 2 ಅಂಕಗಳಿಂದ ಮಣಿಸಿತು. ಮುಂಬೈ ಪಶ್ವಿಮ ರೈಲ್ವೆ ತಂಡವು ಮಹರಾಷ್ಟ್ರ ರಾಜ್ಯ ಪೊಲೀಸ್ ತಂಡವನ್ನು 11 ಅಂಕಗಳಿಂದ ಸೋಲಿಸಿತು. ಮಹಾರಾಷ್ಟ್ರ ರಾಜ್ಯ ವಿದ್ಯುಚ್ಛಕ್ತಿ ಮಂಡಳಿ ತಂಡವು ಸಿಕಂದರಾಬಾದ್ ರೈಲ್ವೆ ತಂಡವನ್ನು 1 ಅಂಕದಿಂದ ಪರಾಭವಗೊಳಿಸಿತು.

ಸೆಂಟರ್ ರೈಲ್ವೆ 1 ಅಂಕದಿಂದ ಗ್ರೇಟರ್ ಮುಂಬೈ ನಗರ ಪಾಲಿಕೆಯನ್ನು, ನವ ಮುಂಬೈ ನಗರ ಪಾಲಿಕೆ ತಂಡವು ಸಿಕಂದರಾಬಾದ್ ತಂಡವನ್ನು ಏಕೈಕ ಅಂಕದಿಂದ ಮಣಿಸಿತು. ಮಹಾರಾಷ್ಟ್ರ ರಾಜ್ಯ ಪೊಲೀಸ್, ಕರ್ನಾಟಕ ಅಧ್ಯಕ್ಷರ ಇಲೆವೆನ್ ತಂಡವನ್ನು ಮಣಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT