ಪಾಂಡವಪುರ (ಮಂಡ್ಯ ಜಿಲ್ಲೆ): ತಾಲ್ಲೂಕಿನ ಕ್ಯಾತನಹಳ್ಳಿ ಗ್ರಾಮದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಗುರುವಾರಮಾಜಿ ಶಾಸಕ ದಿ.ಕೆ.ಎಸ್.ಪುಟ್ಟಣ್ಣಯ್ಯ ಸ್ಮರಣೆಯಲ್ಲಿ ಆರಂಭಗೊಂಡ ಅಖಿಲ ಭಾರತ ಪುರುಷರ ಹೊನಲು–ಬೆಳಕಿನ ಕೊಕ್ಕೊ ಟೂರ್ನಿಯಲ್ಲಿ ಮಹಾರಾಷ್ಟ್ರದ ತಂಡಗಳು ಶುಭಾರಂಭ ಮಾಡಿದವು.
ಮೊದಲ ಪಂದ್ಯದಲ್ಲಿ ನವ ಮುಂಬೈ ಕಾರ್ಪೋರೇಷನ್ ತಂಡ ಮಹರಾಷ್ಟ್ರ ರಾಜ್ಯ ವಿದ್ಯುಚ್ಛಕ್ತಿ ಮಂಡಳಿ ತಂಡದ ವಿರುದ್ಧ 1 ಅಂಕದೊಂದಿಗೆ ಜಯಗಳಿಸಿತು. ವಿದ್ಯುಚ್ಚಕ್ತಿ ಮಂಡಳಿ ತಂಡದ ಆಟಗಾರ ಓಂಕಾರ್ ಪಂದ್ಯ ಶ್ರೇಷ್ಠರಾದರು.
ನಂತರ ಮುಂಬೈ ಪಶ್ವಿಮ ರೈಲ್ವೆ ಹಾಗೂ ಮುಂಬೈ ಮಹಾ ನಗರಪಾಲಿಕೆ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪಶ್ವಿಮ ರೈಲ್ವೆ ತಂಡ 6 ಅಂಕಗಳ ಜಯ ಗಳಿಸಿತು. ಪಶ್ವಿಮ ರೈಲ್ವೆ ತಂಡದ ಆಟಗಾರ ಮಹೇಶ್ ಪಂದ್ಯಶ್ರೇಷ್ಠರಾಗಿ ಹೊರಹೊಮ್ಮಿದರು. ಟೂರ್ನಿಯಲ್ಲಿ ದೇಶದ 11 ಪ್ರಮುಖ ತಂಡಗಳು ಭಾಗವಹಿಸಿವೆ.