ಮುಂಬೈ ಲೆಗ್ಗೆ ಕೊಹ್ಲಿ:ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಆ. 27ರಂದು ನಡೆಯುವ ಮುಂಬೈ ಚರಣದ ಉದ್ಘಾಟನೆ ಸಂದರ್ಭದಲ್ಲಿ ರಾಷ್ಟ್ರಗೀತೆ ಹಾಡುವ ಮೂಲಕ ಕಬಡ್ಡಿ ಜ್ವರಕ್ಕೆ ಕಿಚ್ಚು ಹಚ್ಚಲಿದ್ದಾರೆ. ನಂತರ ಯು–ಮುಂಬಾ ಮತ್ತು ಪುಣೇರಿ ಪಲ್ಟನ್ ನಡುವಣ ಪಂದ್ಯ ನಡೆಯಲಿದೆ. ಪಲ್ಟನ್ಗೆ ಮುಂಬಾ ತಂಡದ ಮಾಜಿ ನಾಯಕ ಅನೂಪ್ ಕುಮಾರ್ ನಾಯಕರಾಗಿದ್ದಾರೆ.