‘ನಾಡಾ ಉದ್ದೀಪನ ಮದ್ದು ತಡೆ ಅಧಿಕಾರಿಗಳನ್ನು (ಡಿಸಿಒ) ನೇಮಕ ಮಾಡುತ್ತದೆ. ಆದರೆ ಅವರು ವೈದ್ಯಕೀಯ ಪರಿಣತರಲ್ಲ. ಎಂಬಿಬಿಎಸ್ ಆಗಿರುವ ವೈದ್ಯಕೀಯ ಪರಿಣತರನ್ನು ನೇಮಕ ಮಾಡಬೇಕು ಎನ್ನುವುದು ನಮ್ಮ ಬೇಡಿಕೆ. ಅದರಲ್ಲೂ ಉದ್ದೀಪನ ಮದ್ದುಗಳ ಕುರಿತು ಸರಿಯಾದ ತಿಳಿವಳಿಕೆ ಇರುವ ವೈದ್ಯರಿರಬೇಕು’ ಎಂದು ಸಾಳ್ವಿ ಹೇಳಿದ್ದಾರೆ.