‘ನಾನು ಭಾರತ ಸರ್ಕಾರಕ್ಕೆ ಆಭಾರಿಯಾಗಿದ್ದೇನೆ. ಅವರ ಸಂಪೂರ್ಣ ನೆರವಿನ ಹೊರತಾಗಿಯೂ ನನಗೆ ಜರ್ಮನಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಕೂಟದ ಸಂಘಟನೆಯಲ್ಲಿರುವ ತಾಂತ್ರಿಕ ಸಮಸ್ಯೆಯಿಂದಾಗಿ ನಾನು ಹೋಗುತ್ತಿಲ್ಲ. ಇದರಿಂದಾಗಿ ಅತೀವ ಬೇಸರವಾಗಿದೆ. ಇದೊಂದು ಅನಿರೀಕ್ಷಿತ ಬೆಳವಣಿಗೆಯಾಗಿದೆ. ಈ ಕುರಿತು ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ’ ಎಂದು ದ್ಯುತಿ ಮಂಗಳವಾರ ಟ್ವೀಟ್ ಮಾಡಿದ್ದಾರೆ. ಅವರು ಒರಿಯಾ ಭಾಷೆಯಲ್ಲಿ ಈ ಸಂದೇಶ ಕಳಿಸಿದ್ದಾರೆ. ಆದರೆ ಸಮಸ್ಯೆಯ ಕುರಿತು ಸ್ಪಷ್ಟಪಡಿಸಿಲ್ಲ.