ಮಾಗಡಿ: ‘ಗ್ರಾಮೀಣ ಹಿನ್ನೆಲೆಯ ಕ್ರೀಡಾಪಟು ಅಗಲಕೋಟೆ ಎನ್.ವಿನೋದ್, ಗೋವಾದಲ್ಲಿ ನಡೆದ ‘ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿ’ಯಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ರಥಮ ಬಹುಮಾನ ಗಳಿಸಿದ್ದಾರೆ. ಸಂಯುಕ್ತ ಭಾರತೀಯ ಖೇಲ್ ಪೌಂಡೇಷನ್ ಕ್ಲಬ್ ಇವರ ಸಾಧನೆ ಗುರುತಿಸಿ, ದುಬೈನಲ್ಲಿ ನಡೆಯಲಿರುವ 19 ವರ್ಷದವರ ಕಬಡ್ಡಿ ಪಂದ್ಯಾವಳಿಗೆ ಆಯ್ಕೆ ಮಾಡಿದ್ದಾರೆ’ ಎಂದು ತಾಲ್ಲೂಕು ದೈಹಿಕ ಶಿಕ್ಷಣ ಅಧಿಕಾರಿ ಸಿ.ಬಿ.ಅಶೋಕ್ ತಿಳಿಸಿದರು.