‘900 ಮೀ ಉದ್ದದ ರಸ್ತೆಯನ್ನು ಸುಮಾರು ₹ 85 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದ್ದು, ಬಹಳ ದಿನಗಳ ಕಾಲ ಗುತ್ತಿಗೆದಾರರು ಜಲ್ಲಿಯನ್ನು ಹರಡಿದ್ದರಿಂದ ವಾಹನ ಸವಾರರಿಗೆ ಓಡಾಡಲು ತೀವ್ರತರ ತೊಂದರೆಯಾಗಿತ್ತು. ಕೆಲವು ದಿನಗಳ ಹಿಂದೆ ಡಾಂಬರ್ ಹಾಕಲಾಗಿದೆ. ಈಗ ರಸ್ತೆಯ ಎರಡೂ ಕಡೆಗಳಲ್ಲಿ ಗುಂಡಿ ಬಿದ್ದಿದೆ. ಕಳಪೆ ಮಣ್ಣನ್ನು ರಸ್ತೆಗೆ ಹಾಕಿರುವುದೇ ಇದಕ್ಕೆ ಕಾರಣ’ ಎಂದು ಜನರು ದೂರಿದ್ದಾರೆ.