ನ್ಯೂಕ್ಯಾಸಲ್, ಇಂಗ್ಲೆಂಡ್ (ಪಿಟಿಐ): ಭಾರತದ ವಿರಾಜ್ ಮಾದಪ್ಪ ಅವರು ಇಲ್ಲಿ ಕೊನೆಗೊಂಡ ಇಂಟರ್ನ್ಯಾಷನಲ್ ಸೀರಿಸ್ ಇಂಗ್ಲೆಂಡ್ ಗಾಲ್ಫ್ ಟೂರ್ನಿಯಲ್ಲಿ ಜಂಟಿ ಆರನೇ ಸ್ಥಾನ ಗಳಿಸಿದರು.
ಮೊದಲ ಎರಡು ದಿನ ಉತ್ತಮ ಪ್ರದರ್ಶನ ನೀಡಿದ್ದ ಮಾದಪ್ಪ, ಬಳಿಕ ಅದೇ ಲಯ ಕಾಪಾಡಿಕೊಳ್ಳುವಲ್ಲಿ ವಿಫಲರಾದರು. ಇದರಿಂದ ಪ್ರಶಸ್ತಿ ಗೆಲ್ಲುವ ಅವಕಾಶ ಕಳೆದುಕೊಂಡರು.
ಕಣದಲ್ಲಿರುವ ಭಾರತದ ಇತರ ಯಾವುದೇ ಸ್ಪರ್ಧಿಗಳು ಅಗ್ರ 20 ರಲ್ಲಿ ಕಾಣಿಸಿಕೊಂಡಿಲ್ಲ. ಗಗನ್ಜೀತ್ ಭುಲ್ಲರ್ ಜಂಟಿ 23ನೇ ಸ್ಥಾನ, ಎಸ್ಎಸ್ಪಿ ಚೌರಾಸಿಯ ಜಂಟಿ 30ನೇ ಸ್ಥಾನ ಪಡೆದುಕೊಂಡರು.
ಶಿವಕಪೂರ್ 36, ಅಜಿತೇಶ್ ಸಂಧು 44, ಎಸ್.ಚಿಕ್ಕರಂಗಪ್ಪ 49, ಕರಣ್ದೀಪ್ ಕೊಚ್ಚಾರ್ 64 ಮತ್ತು ಜೀವ್ ಮಿಲ್ಖಾ ಸಿಂಗ್ ಅವರು ಜಂಟಿ 68ನೇ ಸ್ಥಾನದೊಂದಿಗೆ ಸ್ಪರ್ಧೆ ಕೊನೆಗೊಳಿಸಿದರು.
ಜಿಂಬಾಬ್ವೆಯ ಸ್ಕಾಟ್ ವಿನ್ಸೆಂಟ್ ಟೂರ್ನಿಯಲ್ಲಿ ಚಾಂಪಿಯನ್ ಆದರು. ಟ್ರ್ಯಾವಿಸ್ ಸ್ಮಿತ್, ಸಡೊಮ್ ಕವ್ಕಾಂಜನ ಮತ್ತು ಜಸ್ಟಿನ್ ಹಾರ್ಡಿಂಗ್ ಬಳಿಕದ ಸ್ಥಾನಗಳನ್ನು ಪಡೆದುಕೊಂಡರು.