ಹಂಪಿಯ ಸ್ಮಾರಕಗಳನ್ನು ಕಣ್ತುಂಬಿಕೊಳ್ಳುತ್ತ ಅದರ ಪರಿಸರದಲ್ಲಿ ಸಣ್ಣ ಸಣ್ಣ ಹೆಜ್ಜೆಗಳನ್ನು ಹಾಕಿದರು. ಎದುರು ಬಸವಣ್ಣ ಮಂಟಪದಿಂದ ಆರಂಭವಾದ ಮ್ಯಾರಾಥಾನ್, ಕಡಲೆಕಾಳು ಗಣಪ, ಸಾಸಿವೆಕಾಳು ಗಣಪ, ಕೃಷ್ಣ ದೇವಸ್ಥಾನ, ಕೆಳಸ್ತರ ಶಿವ ದೇವಾಲಯ, ಗಜಶಾಲೆ, ಮಹಾನವಮಿ ದಿಬ್ಬ, ಕಮಲಾಪುರದ ಮೂಲಕ ವಿಜಯ ವಿಠಲ ದೇಗುಲದ ವರೆಗೆ ನಡೆಯಿತು.