ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಲ್ಫ್‌: ವಿಧಾತ್ರಿ, ಯುವರಾಜ್‌ಗೆ ಪ್ರಶಸ್ತಿ

Last Updated 30 ಸೆಪ್ಟೆಂಬರ್ 2022, 19:57 IST
ಅಕ್ಷರ ಗಾತ್ರ

ಬೆಂಗಳೂರು: ಮೈಸೂರಿನ ವಿಧಾತ್ರಿ ಅರಸ್‌ ಮತ್ತು ಪಂಜಾಬ್‌ನ ಯುವರಾಜ್‌ ಸಿಂಗ್‌ ಅವರು ಶುಕ್ರವಾರ ಇಲ್ಲಿ ಕೊನೆಗೊಂಡ ಐಜಿಯು ಬಯೊಜೆನ್ ರೋಟರಿ ಸದರ್ನ್‌ ಇಂಡಿಯಾ ಅಮೆಚೂರ್‌ ಗಾಲ್ಫ್‌ ಟೂರ್ನಿಯಲ್ಲಿ ಕ್ರಮವಾಗಿ ಮಹಿಳೆಯರ ಹಾಗೂ ಪುರುಷರ ವಿಭಾಗದಲ್ಲಿ ಚಾಂಪಿಯನ್‌ ಆದರು.

16 ವರ್ಷದ ವಿಧಾತ್ರಿ ಒಟ್ಟು 212 ಸ್ಕೋರ್‌ಗಳೊಂದಿಗೆ ಅಗ್ರಸ್ಥಾನ ಪಡೆದರು. ಅಮೆಚೂರ್‌ ಟೂರ್ನಿಯ ಸಮಗ್ರ ವಿಭಾಗದಲ್ಲಿ (ಮಹಿಳೆಯರು ಮತ್ತು ಕೆಟಗರಿ ಎ) ಅವರಿಗೆ ದೊರೆತ ಮೊದಲ ಕಿರೀಟ ಇದು. ಈ ಋತುವಿನಲ್ಲಿ ಅವರು ಎರಡು ಟೂರ್ನಿಗಳಲ್ಲಿ ‘ಶ್ರೇಷ್ಠ ಅಮೆಚೂರ್‌ ಸ್ಪರ್ಧಿ’ ಪ್ರಶಸ್ತಿ ಪಡೆದಿದ್ದರು.

ಚಂಡೀಗಢದ ಮನ್ನತ್‌ ಬ್ರಾರ್‌ (215) ಮತ್ತು ಬೆಂಗಳೂರಿನ ಅವನಿ ಪ್ರಶಾಂತ್‌ (217) ಅವರು ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಗಳಿಸಿದರು. ಪುರುಷರ ವಿಭಾಗದಲ್ಲಿ ಯುವರಾಜ್‌ ಅವರು 283 ಸ್ಕೋರ್‌ಗಳೊಂದಿಗೆ ಅಗ್ರಸ್ಥಾನ ತಮ್ಮದಾಗಿಸಿಕೊಂಡರು. ದೆಹಲಿಯ ಶೌರ್ಯ ಭಟ್ಟಾಚಾರ್ಯ (285) ‘ರನ್ನರ್ಸ್‌ ಅಪ್‌’ ಆದರೆ, ಬೆಂಗಳೂರಿನ ಎಂ.ಜಿ.ಮಿಥಿಲ್ (286) ಮೂರನೇ ಸ್ಥಾನ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT