ಗುವಾಹಟಿ: ಕೋವಿಡ್ನಿಂದ ಬಳಲುತ್ತಿದ್ದ ಮಾಜಿ ಒಲಿಂಪಿಯನ್ ಹಾಗೂ ವಿಶ್ವಕಪ್ ಚಿನ್ನದ ಪದಕ ವಿಜೇತ, ಭಾರತದ ಆರ್ಚರಿ ಪಟು ಜಯಂತ್ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಂಕು ತಗುಲಿದ ಒಂದು ವಾರದ ಬಳಿಕ ಅವರ ರಕ್ತದಲ್ಲಿ ಆಮ್ಲಜನಕ ಪ್ರಮಾಣ ಕುಸಿದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಯಂತ್ ಅವರ ತಂದೆ ರಂಜನ್ ತಾಲೂಕ್ದಾರ್ ತಿಳಿಸಿದ್ದಾರೆ.