ಪ್ರತೀಕಾರ ತೀರಿಸಲು ಕಾಯುತ್ತಿರುವ ಬೆಲ್ಜಿಯಂ ಬುಧವಾರ ತನ್ನೆಲ್ಲ ಸಾಮರ್ಥ್ಯವನ್ನು ತೋರಿ ಆಡಲು ಮುಂದಾಗುವ ಸಾಧ್ಯತೆ ಇದೆ. ಆದ್ದರಿಂದ ಪಂದ್ಯ ರೋಚಕವಾಗುವುದು ಖಚಿತ. ಉತ್ತಮ್ ಸಿಂಗ್, ಅರಿಜೀತ್ ಸಿಂಗ್ ಹುಂದಾಲ್, ಸಂದೀಪ್ ಚಿರ್ಮಾಕೊ ಮತ್ತು ಮಣಿಂದರ್ ಸಿಂಗ್ ಅವರು ಭಾರತ ತಂಡದ ಆಧಾರವಾಗಿದ್ದು ಶ್ರದ್ಧಾನಂದ ತಿವಾರಿ, ಅಭಿಷೇಕ್ ಲಾಕ್ರ, ನಾಯಕ ವಿವೇಕ್ ಸಾಗರ್ ಪ್ರಸಾದ್ ಮತ್ತಿರರ ಮೇಲೆಯೂ ನಿರೀಕ್ಷೆ ಇದೆ.