ಪ್ರಬಲ ರಕ್ಷಣಾ ವಿಭಾಗ: ಕೆನಡಾ ಈಚೆಗೆ ಉತ್ತಮ ಸಾಮರ್ಥ್ಯ ತೋರುತ್ತಿದೆ. ಅದರ ರಕ್ಷಣಾ ವಿಭಾಗ ಪ್ರಬಲವಾಗಿದೆ. ಈ ಸವಾಲನ್ನು ಭಾರತದ ಫಾರ್ವರ್ಡ್ ಆಟಗಾರರು ಸಮರ್ಥವಾಗಿ ನಿಭಾಯಿಸಬೇಕಾಗಿದೆ. ಮನದೀಪ್ ಸಿಂಗ್, ಸಿಮ್ರನ್ಜೀತ್ ಸಿಂಗ್, ಆಕಾಶ್ ದೀಪ್ ಸಿಂಗ್ ಮತ್ತು ಲಲಿತ್ ಉಫಾಧ್ಯಾಯ ಅವರು ಈ ಜವಾಬ್ದಾರಿಯನ್ನು ಹೇಗೆ ನಿಭಾಯಿಸುವರು ಎಂಬುದನ್ನು ಕಾದುನೋಡಬೇಕಾಗಿದೆ.