ಕನ್ನಡಿಗರ ಹೋರಾಟದ ಫಲವಾಗಿ, ಇಲ್ಲಿಯವರೆಗೂ ಪ್ರಣಾಳಿಕೆಗೆ ಸೀಮಿತವಾಗಿದ್ದ ಕನ್ನಡ ಇಂದು ಚುನಾವಣೆಯ ವಿಷಯವಾಗಿ ಮಾರ್ಪಟ್ಟಿದೆ. ಇದು ಕನ್ನಡಿಗರಿಗೆ ದೊಡ್ಡ ಗೆಲುವು. ಕನ್ನಡತನವಿಲ್ಲದೆ ಕರ್ನಾಟಕದಲ್ಲಿ ರಾಜಕೀಯ ಸಾಧ್ಯವಿಲ್ಲ ಅನ್ನುವ ವಾತಾವರಣವನ್ನು ನಾವು ನಿರ್ಮಾಣ ಮಾಡಬೇಕಿದೆ.
ಚೇತನ್ ಜೀರಲ್, @chetanjeeral
ಕರ್ನಾಟಕದಿಂದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹೊರಗಿನವರನ್ನು ರಾಜ್ಯಸಭೆಗೆ ಆರಿಸಿ ಕಳಿಸಿವೆ. ಇವರಲ್ಲಿ ಎಷ್ಟು ಜನ ರಾಜ್ಯಸಭೆಯಲ್ಲಿ ಕರ್ನಾಟಕದ ಪರವಾಗಿ ನಿಂತಿದ್ದಾರೆ? ಸಾಕಿನ್ನು ಹೊರಗಿನವರನ್ನು ಆರಿಸುವ ಕೆಲಸ #‘ನಮ್ಮ ಸೀಟು ನಮ್ಮ ಜನ‘ರೇ ಆಯ್ಕೆಯಾಗಲಿ.
ಅರುಣ್ ಜಾವಗಲ್, @ajavgal
ಹೊಸ ನಾಡಧ್ವಜವೇನೋ ಓಕೆ. ನನಗದು ಇಷ್ಟವಾಯಿತು. ಆದರೂ ಈ ವಿಷಯದಲ್ಲಿ ನನಗೊಂದು ಸಂದೇಹವಿದೆ. ಈ ನಾಡಧ್ವಜದ ನಿಖರವಾದ ಉದ್ದೇಶವಾದರೂ ಏನು? ನಮ್ಮ ಮುಂದೆ ಬೇಕಾದಷ್ಟು ವಿಷಯಗಳಿವೆ. ಇಂತಹ ಬ್ರ್ಯಾಂಡಿಂಗ್ಗಳೆಲ್ಲ ಎಷ್ಟರಮಟ್ಟಿಗೆ ನೆರವಾಗುತ್ತವೆ?