ಬೆಂಗಳೂರು: ಮತ್ತೊಮ್ಮೆ ತಮ್ಮ ಚುರುಕಿನ ದಾಳಿಯ ಮೂಲಕ ಗಮನ ಸೆಳೆದ ನಾಯಕ ಪವನ್ ಶೆರಾವತ್ ಮತ್ತು ಭರತ್ ಬೆಂಗಳೂರು ಬುಲ್ಸ್ ತಂಡಕ್ಕೆ ಜಯದ ಕಾಣಿಕೆ ನೀಡಿದರು.
ವೈಟ್ಫೀಲ್ಡ್ನಲ್ಲಿರುವ ಗ್ರ್ಯಾಂಡ್ ಶೆರಟಾನ್ ಹೋಟೆಲ್ನಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡವು 31–26 ರಿಂದ ಯುಪಿ ಯೋಧಾ ವಿರುದ್ಧ ಜಯಿಸಿತು.
ಪವನ್ ಶೆರಾವತ್ (9) ಮತ್ತು ಭರತ್ (6) ರೇಡಿಂಗ್ನಲ್ಲಿ ಮಿಂಚಿದರು. ಅಮನ್ (7) ರಕ್ಷಣಾ ವಿಭಾಗದಲ್ಲಿ ಅಮೋಘ ಸಾಧನೆ ಮೆರೆದರು. ಯೋಧಾ ತಂಡದ ನಿತೀಶ್ ಕುಮಾರ್ ಮತ್ತು ಶ್ರೀಕಾಂತ್ ಜಾಧವ್ ತಲಾ ಆರು ಅಂಕ ಗಳಿಸಿದರು.
ಇನ್ನೊಂದು ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ 34–25ರಿಂದ ಬೆಂಗಾಲ್ ವಾರಿಯರ್ಸ್ ವಿರುದ್ಧ ಜಯಗಳಿಸಿತು. ಗುಜರಾತ್ ತಂಡದ ಅಜಯ್ ಕುಮಾರ್ (9), ಪ್ರದೀಪ್ ಕುಮಾರ್ (7) ರೇಡಿಂಗ್ನಲ್ಲಿ ಮಿಂಚಿದರು. ಬೆಂಗಾಲ್ ತಂಡದ ನಾಯಕ ಮಣಿಂದರ್ ಸಿಂಗ್ ಒಂಬತ್ತು ಅಂಕಗಳನ್ನು ಗಳಿಸಿದರು.
ಬುಧವಾರ ಯುಪಿ ಯೋಧಾ– ಪಟ್ನಾ ಪೈರೇಟ್ಸ್, ಪುಣೇರಿ ಪಲ್ಟನ್– ಯು ಮುಂಬಾ ಸೆಣಸಲಿವೆ.