ಯಮಕನಮರಡಿ (ಬೆಳಗಾವಿ ಜಿಲ್ಲೆ): ಪರವಾನಗಿ ಇಲ್ಲದೇ, ಲಾರಿಯೊಂದರಲ್ಲಿ ಸಾಗಿಸುತ್ತಿದ್ದ 72 ಚೀಲ ಗೋಧಿಯನ್ನು ಗ್ರಾಮದ ಗಡಿಭಾಗದ ಚೆಕ್ಪೋಸ್ಟ್ನಲ್ಲಿ ಭಾನುವಾರ ವಶಪಡಿಸಿಕೊಳ್ಳಲಾಗಿದೆ.
ಲಾರಿ, ಸಮೀಪದ ಉಳ್ಳಾಗಡ್ಡಿ– ಖಾನಾಪುರದಿಂದ ಮಹಾರಾಷ್ಟ್ರದ ಹಲಕರ್ಣಿಗೆ ಕಡೆಗೆ ಹೊರಟಿತ್ತು. ಪೊಲೀಸರು ತಪಾಸಣೆ ನಡೆಸಿದಾಗ ವಾಹನ
ದಲ್ಲಿ ಅಕ್ರಮವಾಗಿ ಗೋಧಿ ಸಾಗಿಸುತ್ತಿದ್ದುದು ಪತ್ತೆಯಾಗಿದೆ. ಲಾರಿಯನ್ನು ವಶಕ್ಕೆ ಪಡೆದು, ಚಾಲಕನನ್ನು ಬಂಧಿಸಲಾಗಿದೆ.
ಆಹಾರ ಇಲಾಖೆಯ ಅಧಿಕಾರಿ ಈಶ್ವರ ದಯಾನವರ, ಲೋಕೇಶ ಢಾಂಗೆ, ಯಮಕನಮರಡಿ ಪಿಎಸ್ಐ ಎಸ್.ಪಿ.ಪಾಟೀಲ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಯಮಕನಮರಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.