ಕಾಂಗ್ರೆಸ್ ಸದಸ್ಯರ ವರ್ತನೆಯಿಂದ ಕೆರಳಿದ ಸಿ.ಟಿ. ರವಿ, ‘ಸ್ಕೆಚ್ ಹಾಕಿದ್ದರೆ ಹೇಳಿ, ಸಾವಿಗೆ ಹೆದರುವುದಿಲ್ಲ’ ಎಂದು ಕೂಗಾಡಿದರು. ಇದಕ್ಕೆ ಧ್ವನಿಗೂಡಿಸಿದ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್, ಉಪ ನಾಯಕ ಆರ್. ಅಶೋಕ, ವಿಶ್ವೇಶ್ವರ ಹೆಗಡೆ ಕಾಗೇರಿ, ಅರವಿಂದ ಲಿಂಬಾವಳಿ, ಡಿ.ಎನ್. ಜೀವರಾಜ್, ‘ರವಿ ಹೆಸರು ಹೇಳಿದವರು ಯಾರೆಂಬುದು ಗೊತ್ತಾಗಬೇಕು’ ಎಂದು ಪಟ್ಟು ಹಿಡಿದರು.