ಪಟ್ಟುಬಿಡದೆ ಮರುಹೋರಾಟ ನಡೆಸಿದ ಮುಂಬೈ ಹಿನ್ನಡೆಯನ್ನು 19–21ಕ್ಕೆ ತಗ್ಗಿಸಿತು. ಮಹೇಶ್ ಮಗ್ದೂಮ್, ಮಣಿವೀರ ಕಾಂತ ಮತ್ತು ಅರುಳ್ ರೇಡಿಂಗ್ನಲ್ಲಿ ಮೇಲಿಂದ ಮೇಲೆ ಪಾಯಿಂಟ್ ಕಲೆಹಾಕಿದರು. ಪಂದ್ಯ ಕೊನೆಗೊಳ್ಳಲು ನಾಲ್ಕು ನಿಮಿಷಗಳಿರುವಾಗ ಎದುರಾಳಿ ತಂಡವನ್ನು ಆಲೌಟ್ ಮಾಡಿದ26–26 ರಲ್ಲಿ ಸಮಬಲ ಸಾಧಿಸಿತು. ಆ ಬಳಿಕ ಪೂರ್ಣ ಪ್ರಭುತ್ವ ಸಾಧಿಸಿ ಗೆಲುವು ಒಲಿಸಿಕೊಂಡಿತು.