<p>ಬೆಂಗಳೂರು: ವಸಂತ್ ಮತ್ತು ಸಂತೋಷ್ ಅವರ ಆಕರ್ಷಕ ಆಟದ ನೆರವಿನಿಂದ ಡಿವೈಇಎಸ್ ತಂಡವು ಹಾಕಿ ಕರ್ನಾಟಕ ಲೀಗ್ ಐದನೇ ಆವೃತ್ತಿಯ ಚಾಂಪಿಯನ್ಷಿಪ್ನ ಪಂದ್ಯದಲ್ಲಿ ಜಯಭೇರಿ ಮೊಳಗಿಸಿದೆ.</p>.<p>ಶಾಂತಿನಗರದಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅರೆನಾದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಡಿವೈಇಎಸ್ 9–1 ಗೋಲುಗಳಿಂದ ಆರ್ಡಬ್ಲ್ಯುಎಫ್ ತಂಡವನ್ನು ಪರಾಭವಗೊಳಿಸಿತು.</p>.<p>ವಸಂತ್, 9 ಮತ್ತು 31ನೇ ನಿಮಿಷಗಳಲ್ಲಿ ಗೋಲು ಗಳಿಸಿದರೆ, ಸಂತೋಷ್ 23 ಮತ್ತು 42ನೇ ನಿಮಿಷಗಳಲ್ಲಿ ಕೈಚಳಕ ತೋರಿದರು.</p>.<p>ಎಸ್.ಪಿ.ದೀಕ್ಷಿತ್ (6), ಪುನೀತ್ (7), ಮಣಿಕಂಠ (11), ಕುಮಾರ್ (32) ಮತ್ತು ಕೆ.ಆರ್.ಭರತ್ (40ನೇ ನಿಮಿಷ) ಕೂಡಾ ಮಿಂಚಿದರು.</p>.<p>ಆರ್ಡಬ್ಲ್ಯುಎಫ್ ಪರ ಸುಶೀಲ್ 12ನೇ ನಿಮಿಷದಲ್ಲಿ ಗೋಲು ಹೊಡೆದರು.</p>.<p>ಇನ್ನೊಂದು ಪಂದ್ಯದಲ್ಲಿ ಸಾಯ್ 8–1 ಗೋಲುಗಳಿಂದ ಪೋಸ್ಟಲ್ ತಂಡದ ಎದುರು ಗೆದ್ದಿತು.</p>.<p>ಸಾಯ್ ತಂಡದ ಹರೀಶ್ ಮುತಗಾರ್ 19 ಮತ್ತು 37ನೇ ನಿಮಿಷಗಳಲ್ಲಿ ಗೋಲು ಬಾರಿಸಿದರು. ಆಭರಣ್ ಸುದೇವ್ ಕೂಡಾ (38 ಮತ್ತು 59ನೇ ನಿಮಿಷ) ಎರಡು ಗೋಲು ಗಳಿಸಿದರು.</p>.<p>ರಾಜೇಂದ್ರ (24), ಬಿ.ಎಂ.ಲಿಖಿತ್ (51), ವೀರಣ್ಣ ಗೌಡ (53) ಮತ್ತು ಪ್ಲಾನಾಗಪ್ಪ (57ನೇ ನಿ.) ಅವರೂ ಗಮನ ಸೆಳೆದರು.</p>.<p>ಪೋಸ್ಟಲ್ ತಂಡದ ಎಚ್.ಟಿ.ರಮೇಶ್ ಐದನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>ಬೆಂಗಳೂರು: ವಸಂತ್ ಮತ್ತು ಸಂತೋಷ್ ಅವರ ಆಕರ್ಷಕ ಆಟದ ನೆರವಿನಿಂದ ಡಿವೈಇಎಸ್ ತಂಡವು ಹಾಕಿ ಕರ್ನಾಟಕ ಲೀಗ್ ಐದನೇ ಆವೃತ್ತಿಯ ಚಾಂಪಿಯನ್ಷಿಪ್ನ ಪಂದ್ಯದಲ್ಲಿ ಜಯಭೇರಿ ಮೊಳಗಿಸಿದೆ.</p>.<p>ಶಾಂತಿನಗರದಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅರೆನಾದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಡಿವೈಇಎಸ್ 9–1 ಗೋಲುಗಳಿಂದ ಆರ್ಡಬ್ಲ್ಯುಎಫ್ ತಂಡವನ್ನು ಪರಾಭವಗೊಳಿಸಿತು.</p>.<p>ವಸಂತ್, 9 ಮತ್ತು 31ನೇ ನಿಮಿಷಗಳಲ್ಲಿ ಗೋಲು ಗಳಿಸಿದರೆ, ಸಂತೋಷ್ 23 ಮತ್ತು 42ನೇ ನಿಮಿಷಗಳಲ್ಲಿ ಕೈಚಳಕ ತೋರಿದರು.</p>.<p>ಎಸ್.ಪಿ.ದೀಕ್ಷಿತ್ (6), ಪುನೀತ್ (7), ಮಣಿಕಂಠ (11), ಕುಮಾರ್ (32) ಮತ್ತು ಕೆ.ಆರ್.ಭರತ್ (40ನೇ ನಿಮಿಷ) ಕೂಡಾ ಮಿಂಚಿದರು.</p>.<p>ಆರ್ಡಬ್ಲ್ಯುಎಫ್ ಪರ ಸುಶೀಲ್ 12ನೇ ನಿಮಿಷದಲ್ಲಿ ಗೋಲು ಹೊಡೆದರು.</p>.<p>ಇನ್ನೊಂದು ಪಂದ್ಯದಲ್ಲಿ ಸಾಯ್ 8–1 ಗೋಲುಗಳಿಂದ ಪೋಸ್ಟಲ್ ತಂಡದ ಎದುರು ಗೆದ್ದಿತು.</p>.<p>ಸಾಯ್ ತಂಡದ ಹರೀಶ್ ಮುತಗಾರ್ 19 ಮತ್ತು 37ನೇ ನಿಮಿಷಗಳಲ್ಲಿ ಗೋಲು ಬಾರಿಸಿದರು. ಆಭರಣ್ ಸುದೇವ್ ಕೂಡಾ (38 ಮತ್ತು 59ನೇ ನಿಮಿಷ) ಎರಡು ಗೋಲು ಗಳಿಸಿದರು.</p>.<p>ರಾಜೇಂದ್ರ (24), ಬಿ.ಎಂ.ಲಿಖಿತ್ (51), ವೀರಣ್ಣ ಗೌಡ (53) ಮತ್ತು ಪ್ಲಾನಾಗಪ್ಪ (57ನೇ ನಿ.) ಅವರೂ ಗಮನ ಸೆಳೆದರು.</p>.<p>ಪೋಸ್ಟಲ್ ತಂಡದ ಎಚ್.ಟಿ.ರಮೇಶ್ ಐದನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>