ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ.ಟಿ:ಆಕಾಶ್‌, ಕರುಣಾಗೆ ಕಿರೀಟ

Last Updated 8 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ಕೆ.ಜೆ.ಆಕಾಶ್‌ ಮತ್ತು ಕರುಣಾ ಗಜೇಂದ್ರನ್‌ ಅವರು ಕರ್ನಾಟಕ ರಾಜ್ಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಜೂನಿಯರ್‌ ಬಾಲಕರ ಮತ್ತು ಬಾಲಕಿಯರ ವಿಭಾಗಗಳಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಗುರುವಾರ ನಡೆದ ಫೈನಲ್‌ನಲ್ಲಿ ಆಕಾಶ್‌ 11–6, 7–11, 11–7, 11–4, 4–11, 11–13, 12–10ರಲ್ಲಿ ಸುಜನ್‌ ಆರ್‌.ಭಾರದ್ವಾಜ್‌ ಅವರನ್ನು ಸೋಲಿಸಿದರು.

ಇದಕ್ಕೂ ಮೊದಲು ನಡೆದಿದ್ದ ಸೆಮಿಫೈನಲ್‌ ಪಂದ್ಯಗಳಲ್ಲಿ ಆಕಾಶ್‌ 11–7, 12–14, 11–9, 8–11, 13–11, 11–9ರಲ್ಲಿ ಸಮ್ಯಕ್ ಕಶ್ಯಪ್‌ ಎದುರೂ, ಸುಜನ್‌ 8–11, 11–4, 9–11, 11–8, 11–6, 11–5ರಲ್ಲಿ ಪಿ.ಯಶವಂತ್‌ ವಿರುದ್ಧವೂ ಗೆದ್ದಿದ್ದರು.

ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಕರುಣಾ 12–10, 9–11, 9–11, 12–10, 6–11, 11–9, 6–11ರಲ್ಲಿ ಅದಿತಿ ಪಿ.ಜೋಶಿ ಅವರನ್ನು ಪರಾಭವಗೊಳಿಸಿದರು.

ನಾಲ್ಕರ ಘಟ್ಟದ ಪಂದ್ಯಗಳಲ್ಲಿ ಅದಿತಿ 11–6, 12–10, 11–8, 11–13, 11–8ರಲ್ಲಿ ತೃಪ್ತಿ ಪುರೋಹಿತ್‌ ಎದುರೂ, ಕರುಣಾ 11–6, 11–7, 12–14, 11–8, 11–4ರಲ್ಲಿ ಪಿ.ಎಂ.ಶ್ವೇತಾ ವಿರುದ್ಧವೂ ವಿಜಯಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT