ಕರ್ನಾಟಕದಲ್ಲಿ ಮೊದಲ ಬಾರಿ ರಚನೆಯಾಗಿದ್ದ ಬಿಜೆಪಿ ಸರ್ಕಾರವನ್ನು ಮತ್ತು ಕೇಂದ್ರದಲ್ಲಿ ಯುಪಿಎ–2 ಸರ್ಕಾರವನ್ನು ಜನರು ಕಿತ್ತೊಗೆಯಲು ಈ ಸರ್ಕಾರಗಳ ಅವಧಿಯಲ್ಲಿ ನಡೆದಿದ್ದ ಹಗರಣಗಳೇ ಕಾರಣ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಮರೆಯಬಾರದು.
ಮೋದಿ ಅವರು ಈ ಹಿಂದೆ ಮನಮೋಹನ್ ಸಿಂಗ್ ಅವರನ್ನು ‘ಮೌನ್ ಮೋಹನ್’ ಎಂದು ಹಂಗಿಸಿದ್ದರು. ಈಗ ಇವರು ಮಾಡುತ್ತಿರುವುದೇನು? ವಿರೋಧ ಪಕ್ಷಗಳ ಯಾವ ಪ್ರಶ್ನೆಗೂ ಮೋದಿ ಉತ್ತರಿಸುವುದಿಲ್ಲ. ಹಗರಣಗಳ ಬಗ್ಗೆ ಮಾತನಾಡದಿದ್ದರೆ ನಡೆದೇ ಇಲ್ಲವೆಂದು ಅರ್ಥವಲ್ಲ. ಇದನ್ನು ಮೋದಿ ಬೇಗ ಅರಿತುಕೊಳ್ಳಬೇಕು.