ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಜೂನಿಯರ್‌ ಬ್ಯಾಸ್ಕೆಟ್‌ಬಾಲ್: ಆತ್ಮವಿಶ್ವಾಸದಲ್ಲಿ ಕರ್ನಾಟಕ ತಂಡಗಳು

ಬೆಂಗಳೂರಿನಲ್ಲಿ ಇಂದಿನಿಂದ
Last Updated 20 ಜನವರಿ 2023, 22:07 IST
ಅಕ್ಷರ ಗಾತ್ರ

ಬೆಂಗಳೂರು: ಆತಿಥೇಯ ಕರ್ನಾಟಕ ತಂಡಗಳು ಶನಿವಾರ ಇಲ್ಲಿ ಆರಂಭವಾಗಲಿರುವ 72ನೇ ರಾಷ್ಟ್ರೀಯ ಜೂನಿಯರ್‌ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿವೆ.

ಕರ್ನಾಟಕ ಬ್ಯಾಸ್ಕೆಟ್‌ಬಾಲ್‌ ಸಂಸ್ಥೆಯು (ಕೆಬಿಎ) ಭಾರತ ಬ್ಯಾಸ್ಕೆಟ್‌ ಬಾಲ್‌ ಫೆಡರೇಷನ್‌ (ಬಿಎಫ್‌ಐ) ಸಹಯೋಗದಲ್ಲಿ ಆಯೋಜಿಸಿರುವ ಟೂರ್ನಿಯ ಪಂದ್ಯಗಳು ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ.

ಜನವರಿ 27ರ ವರೆಗೆ ನಡೆಯುವ ಟೂರ್ನಿಯಲ್ಲಿ ಬಾಲಕ ಮತ್ತು ಬಾಲಕಿ ಯರ ವಿಭಾಗದಲ್ಲಿ ತಲಾ 16 ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.

ಶನಿವಾರ ನಡೆಯುವ ಮೊದಲ ಪಂದ್ಯದಲ್ಲಿ ಆತಿಥೇಯ ಬಾಲಕರು ಮಣಿ ಪುರ ತಂಡವನ್ನು ಹಾಗೂ ಬಾಲಕಿಯರು ಆಂಧ್ರ ತಂಡವನ್ನು ಎದುರಿಸಲಿದ್ದಾರೆ.

‘ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ ಸುಮಾರು 400 ಸ್ಪರ್ಧಿಗಳು, 80 ಕೋಚ್‌ಗಳು ಮತ್ತು 50 ತಾಂತ್ರಿಕ ಅಧಿಕಾರಿಗಳು ಪಾಲ್ಗೊಳ್ಳುವರು’ ಎಂದು ಕೆಬಿಎ ಉಪಾಧ್ಯಕ್ಷ ಆರ್‌.ರಾಜನ್‌ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಿಎಫ್‌ಐ ತಾಂತ್ರಿಕ ಸಮಿತಿ ಮುಖ್ಯಸ್ಥ ನಾರ್ಮನ್‌ ಐಸಾಕ್, ಕೆಬಿಎ ಪದಾಧಿಕಾರಿಗಳಾದ ಎಸ್‌.ಗುಣಶೇಖರ, ಆರ್‌.ಪ್ರಕಾಶ್‌, ಎಚ್‌.ಶ್ರೀನಿವಾಸಮೂರ್ತಿ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ಕರ್ನಾಟಕ ತಂಡಗಳು
ಬಾಲಕರು:
ಎಸ್‌.ಸಂಕೇತ್‌, ಎಂ.ಅಮರ್ತ್ಯ, ನಿಹಾಲ್, ಎಂ.ಬಿ.ಶಶಾಂಕ್‌ ಗೌಡ, ಪ್ರಿಯಾನ್ಶು, ಅವಿನಾಶ್‌ ನಾಯಕ್, ಎನ್‌.ಎಂ.ವಿಷ್ಣು, ಆರ್‌.ನಿತಿನ್‌ ಕುಮಾರ್, ಕುಶಾಲ್‌ ಗೌಡ, ಗೋಸ್ವಾಮಿ ಶಿವಂ, ಎಸ್‌.ಭುವನ್, ಕೆ.ಲಿಂಗೇಶ್. ಕೋಚ್‌: ಉಮಾಶಂಕರ್, ಮ್ಯಾನೇಜರ್‌: ಗುಣಶೇಖರ್‌

ಬಾಲಕಿಯರು: ನಿಹಾರಿಕಾ ರೆಡ್ಡಿ, ಮೇಖಲಾ ಗೌಡ, ಆದ್ಯಾ ಪಿ. ಐತಾಳ್, ಹನಾ ಬಾಬಿ ಜೇಕಬ್‌, ಆದ್ಯಾ ನಾಗಲಿಂಗ, ಆದ್ಯಾ ಗೌಡ, ಐಶ್ವರ್ಯಾ ಎಸ್‌., ಅದಿತಿ ನಾಗರಾಜನ್, ಎಂ.ಕೆ.ಯಶಸ್ವಿನಿ, ಪ್ರೀತಿ ಎಂ., ಪ್ರಿಯಾಂಕಾ, ಎನ್‌.ಖುಷಿ. ಕೋಚ್‌: ಕೆ.ಸತ್ಯನಾರಾಯಣ, ಮ್ಯಾನೇಜರ್‌: ಜೆ.ವಾಣಿಶ್ರೀ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT