ನವದೆಹಲಿ: ಕ್ರೀಡೆಗಳು ಮತ್ತೆ ಆರಂಭವಾಗಲು ಕೊರೊನಾ ವೈರಸ್ಗೆ ಚುಚ್ಚುಮದ್ದು ಕಂಡುಹಿಡಿಯುವುದು ತುರ್ತು ಅಗತ್ಯ. ಆದರೆ ಈ ಚುಚ್ಚುಮದ್ದಿಗೆ ವಿಶ್ವ ಉದ್ದೀಪನ ಮದ್ದು ಸೇವನೆ ತಡೆ ಘಟಕದ (ವಾಡಾ) ಸಮ್ಮತಿಯೂ ಅಗತ್ಯ. ಇಲ್ಲದಿದ್ದರೆ ಅಥ್ಲೀಟುಗಳು ವಿನಾ ಕಾರಣ ಸಮಸ್ಯೆ ಎದುರಿಸಬೇಕಾದೀತು ಎಂದು ಭಾರತದ ಬ್ಯಾಡ್ಮಿಂಟನ್ ಆಟ ಗಾರ ಬಿ.ಸಾಯಿ ಪ್ರಣೀತ್ ಅಭಿಪ್ರಾಯಪಟ್ಟಿದ್ದಾರೆ.