ಈ ಟೂರ್ನಿಯ ಪ್ರತಿ ಸುತ್ತಿನಲ್ಲಿ ನಿರ್ಣಾಯಕ ಫಲಿತಾಂಶ ಪಡೆಯಬೇಕಾಗುತ್ತದೆ. ಇಲ್ಲದಿದ್ದರೆ ಸುತ್ತಿನ ವಿಜಯಿಯನ್ನು ನಿರ್ಧರಿಸಲು ಟೈಬ್ರೇಕ್ ಪಂದ್ಯ ಆಡಬೇಕಾಗುತ್ತದೆ. ಆನಂದ್ ಮೊದಲ ಎರಡು ಸುತ್ತುಗಳಲ್ಲಿ ಕ್ರಮವಾಗಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸನ್ ಮತ್ತು ಶಕ್ರಿಯಾರ್ ಮೆಮೆಡ್ಯರೋವ್ ವಿರುದ್ಧ ಸೋಲನುಭವಿಸಿದ್ದರು. ನಂತರ ಸತತ ಮೂರು ಗೆಲುವಿನೊಡನೆ ಚೇತರಿಸಿಕೊಂಡಿದ್ದರು. ಆದರೆ, ಭಾರತದ ಆಟಗಾರ ಆರನೇ ಸುತ್ತಿನಲ್ಲಿ ಯು ಯಾಂಗಿ ವಿರುದ್ಧ ಸೋಲನುಭವಿಸಿದ್ದರು.