’ಮಲ್ಲೇಶ್ವರದ ಹೆಮ್ಮೆಯ ಬ್ಯಾಸ್ಕೆಟ್ ಬಾಲ್ ಆಟಗಾರರಾಗಿದ್ದವರು. 1960ರ ದಶಕದಲ್ಲಿ ಅವರು ಉತ್ತಮ ಆಟಗಾರನಾಗಿ ಹೆಸರುವಾಸಿಯಾಗಿದ್ದರು ವೇಗ ಮತ್ತು ಚಾಣಾಕ್ಷ ಆಟಗಾರರಾಗಿದ್ದರು. ಆಗಿನ ಮೈಸೂರು ರಾಜ್ಯ ತಂಡಕ್ಕೆ ಆಡಿದ್ದರು. ಟೋಕಿಯೊದಲ್ಲಿ ನಡೆದಿದ್ದ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು‘ ಎಂದು ಹಿರಿಯ ಆಟಗಾರ ರಾಜಗೋಪಾಲ್ ಕಡಂಬಿ ಅವರು ಜೈರಾಜ್ ಕುರಿತು ಹೇಳಿದ್ದಾರೆ.