ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19 ವಿರುದ್ಧ ಹೋರಾಟ | ಚೆಸ್‌: ₹ 8.8 ಲಕ್ಷ ದೇಣಿಗೆ ಸಂಗ್ರಹ

Last Updated 26 ಏಪ್ರಿಲ್ 2020, 21:20 IST
ಅಕ್ಷರ ಗಾತ್ರ

ಚೆನ್ನೈ: ಚೆಸ್‌ ಆಟಗಾರ ವಿಶ್ವನಾಥನ್‌ ಆನಂದ್‌ ಹಾಗೂ ಭಾರತ ಕ್ರಿಕೆಟ್‌ ತಂಡದ ಆಟಗಾರ ಯಜು ವೇಂದ್ರ ಚಾಹಲ್‌ ಸೇರಿದಂತೆ ಹಲವರು ಆನ್‌ಲೈನ್‌ ಚೆಸ್‌ ಟೂರ್ನಿಯ ಮೂಲಕ ದೇಣಿಗೆ ಸಂಗ್ರಹಿಸಿ ಕೋವಿಡ್‌–19 ಪಿಡುಗಿನ ವಿರುದ್ಧದ ಹೋರಾಟಕ್ಕೆ ನೆರವಾಗಿದ್ದಾರೆ.

ಚೆಸ್‌.ಕಾಂ.ನಲ್ಲಿ ‘ಚೆಸ್‌ ಫಾರ್‌ ಚಾರಿಟಿ’ ಹೆಸರಿನಲ್ಲಿ ಶನಿವಾರ ನಡೆದ ಈ ಸಹಾಯಾರ್ಥ ಟೂರ್ನಿಯಲ್ಲಿ ಒಟ್ಟು₹ 8.8 ಲಕ್ಷ ಸಂಗ್ರಹವಾಗಿದೆ. ಇದನ್ನು ಪೌರ ಕಾರ್ಮಿಕ ಸಮುದಾಯಕ್ಕೆ ನೀಡಲಾಗುತ್ತದೆ.

ಭಾರತದ ವಿದಿತ್‌ ಗುಜರಾತಿ, ತಾನಿಯಾ ಸಚ್‌ದೇವ್‌ ಸೇರಿದಂತೆ ಹಲವರು ಇದರಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT